Advertisement

Sandalwood; ಮುಹೂರ್ತದಲ್ಲಿ ಹೊಸಬರ ಲಿಪ್‌ ಲಾಕ್;‌ ಇದು ಅದಲ್ಲ..

04:17 PM Aug 25, 2024 | Team Udayavani |

“ಯಂಗ್‌ ಮ್ಯಾನ್‌ ಚಿತ್ರದ ನಿರ್ದೇಶಕ ಮುತ್ತುರಾಜ್‌ ನಿರ್ದೇಶನದ ಹೊಸ ಚಿತ್ರ “ಲಿಪ್‌ಲಾಕ್‌’ಗೆ ಇತ್ತೀಚೆಗೆ ಮುಹೂರ್ತ ನಡೆದಿದೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕರು, “ಎಲ್ಲರೂ ಅಂದುಕೊಂಡಿರುವ ಲಿಪ್‌ಲಾಕ್‌ ಬೇರೆ. ಆದರೆ ಲಿಪ್‌ಲಾಕ್‌ ನಿಜವಾದ ಅರ್ಥ ಬೇರೆ. ಇದೊಂದು ಪರಿಶುದ್ಧ ಪ್ರೇಮಕಥೆ.ಯಾವುದೇ ಮುಜುಗರವಿಲ್ಲದೇ ಕುಟುಂಬ ಸಮೇತ ಬಂದು ಎಲ್ಲರೂ ನೋಡಬಹುದಾದ ಕೌಟುಂಬಿಕ ಕಥೆಯೂ ಹೌದು.

Advertisement

ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯುತ್ತದೆ. ಕರಣ್‌ ಆರ್ಯನ್‌, ತ್ರಿವಿಕ್ರಮ್‌ ಹಾಗೂ ಚಿತ್ರದ ನಿರ್ಮಾಪಕರೂ ಆಗಿರುವ ಹೇಮಂತ್‌ ಕುಮಾರ್‌ ಈ ಚಿತ್ರದ ನಾಯಕರಾಗಿದ್ದು, ನಾಯಕಿಯರಾಗಿ ದೀಪ, ಜಗದೀಶ್‌, ಸೃಷ್ಟಿ , ನಿಹಾರಿಕಾ ನಟಿಸುತ್ತಿದ್ದಾರೆ. ಜಗಪ್ಪ, ಆನಂದ್‌, ಕರಿಬಸವ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಲೋಕಿ ತವಸ್ಯ ಸಂಗೀತ ನಿರ್ದೇಶನ, ವೀನಸ್‌ ನಾಗರಾಜ್‌ ಮೂರ್ತಿ ಛಾಯಾಗ್ರಹಣ ಹಾಗೂ ಸತೀಶ್‌ ಚಂದ್ರಯ್ಯ ಅವರ ಸಂಕಲನ ಈ ಚಿತ್ರಕ್ಕಿದೆ’ ಎಂದರು.

“ನಿರ್ಮಾಪಕನಾಗಿ ಇದು ಮೊದಲ ಚಿತ್ರ. ಹೇಮಂತ್‌ ಸಿನಿಮಾಸ್‌ ಹಾಗೂ ಪರಿ ಮೂವೀ ಮೇಕರ್ಸ್‌ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನಿರ್ಮಾಣದ ಜೊತೆಗೆ ಪ್ರಮುಖ ಪಾತ್ರದಲ್ಲೂ ನಟಿಸುತ್ತಿದ್ದೇನೆ’ ಎಂದರು ಹೇಮಂತ್‌ ಕೃಷ್ಣಮೂರ್ತಿ.

ನಿರ್ದೇಶಕರು ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ನನ್ನದು ಈ ಚಿತ್ರದಲ್ಲಿ ಕೆಳ ಮಧ್ಯಮ ವರ್ಗದ ಹುಡುಗನ ಪಾತ್ರ ಎಂದರು ನಟ ಕರಣ್‌ ಆರ್ಯನ್‌. ನಟಿಯರಾದ ದೀಪ ಜಗದೀಶ್‌, ಸೃಷ್ಟಿ ಹಾಗೂ ನಿಹಾರಿಕಾ ಕೂಡ ಚಿತ್ರದ ಕುರಿತು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next