Advertisement

ಹೊಸಬರ ಅಭಿಷ್ಟಾರ್ಥಂ ಶುರು

10:54 AM Sep 05, 2017 | |

ಕನ್ನಡದಲ್ಲಿ ಸಾಕಷ್ಟು ಥ್ರಿಲ್ಲರ್‌ ಮತ್ತು ಸಸ್ಪೆನ್ಸ್‌ ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ. ಆ ಸಾಲಿಗೆ ಈಗ “ಅಭಿಷ್ಟಾರ್ಥಂ’ ಎಂಬ ಸಿನಿಮಾ ಕೂಡ ಸೇರಿದೆ. ಇದೊಂದು ಥ್ರಿಲ್ಲರ್‌ ಕಮ್‌ ಲವ್‌ ಕಥೆ ಹೊಂದಿರುವ ಸಿನಿಮಾ. ಈ ಚಿತ್ರಕ್ಕೆ ಎ.ಆರ್‌.ವಿಜಯ್‌ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Advertisement

ವಿಜಯ್‌ ಈ ಹಿಂದೆ “ಮಹಾರುದ್ರಂ’ ಎಂಬ ಚಿತ್ರ ಮಾಡಿದ್ದರೂ, ಆ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಈಗ ಎರಡನೇ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲು ತಯಾರಿ ನಡೆಸಿದ್ದಾರೆ ವಿಜಯ್‌. ಇನ್ನು, ಈ ಚಿತ್ರದ ಮೂಲಕ ಹೇಮಂತ್‌ ಕುಮಾರ್‌ ಎಂಬ ಹೊಸ ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಇವರಿಗೆ ನಾಯಕಿಯಾಗಿ ಇತಿ ಆಚಾರ್ಯ ಕಾಣಿಸಿಕೊಳ್ಳಲಿದ್ದಾರೆ. ಇತಿ ಆಚಾರ್ಯಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈಗಾಗಲೇ ಕೋಮಲ್‌ ಅಭಿನಯದ ಸಿನಿಮಾದಲ್ಲಿ ನಟಿಸಿದ್ದರು. ಬಾಲಿವುಡ್‌ನ‌ ಕೆಲ ಸಿನಿಮಾದಲ್ಲೂ ಇತಿ ಆಚಾರ್ಯ ನಟಿಸಿದ್ದಾರೆ.

2016ರ “ಮಿಸ್‌ ಸೌತ್‌ ಇಂಡಿಯಾ’ ಎನಿಸಿಕೊಂಡಿದ್ದ ಇತಿ ಆಚಾರ್ಯಗೆ ಇಲ್ಲಿ ಹೊಸತನದ ಪಾತ್ರ ಕಟ್ಟಿಕೊಡಲಾಗಿದೆಯಂತೆ. ಬೆಂಗಳೂರು, ಮಂಗಳೂರು ಹಾಗೂ ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಮಾರುತಿ ಮೂವಿ ಮೇಕರ್ ಬ್ಯಾನರ್‌ನಲ್ಲಿ ಪ್ರೇಮಲೀಲಾ, ಇಂದುಶೇಖರ್‌ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರಕ್ಕೆ ಸಂತೋಷ್‌ ಸಾಹಿತ್ಯ ಮತ್ತು ಸಂಗೀತವಿದೆ. ಅರ್ಜುನ್‌ (ಕಿಟ್ಟು) ಸಂಕಲನ ಮಾಡಿದರೆ, ವಿಕ್ರಂ ಮೋರ್‌ ಸಾಹಸವಿದೆ. ಕಲೈ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಚಿತ್ರದಲ್ಲಿ ಮನೋಜ್‌ಮಿಶ್ರ, ಲಯೇಂದ್ರ ಇತರರು ನಟಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next