Advertisement

Shivaraj Tangadagi: ನಾವು ಮನಸ್ಸು ಮಾಡಿ ಕರೆದರೆ ಬಿಜೆಪಿ,ಜೆಡಿಎಸ್ ಎರಡೂ ಖಾಲಿ ಆಗುತ್ತದೆ

02:52 PM Aug 21, 2023 | Team Udayavani |

ದಾವಣಗೆರೆ: ಕಾಂಗ್ರೆಸ್ ನವರು ಮನಸ್ಸು ಮಾಡಿ ಕರೆದರೆ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಖಾಲಿಯೇ ಆಗಿ ಬಿಡುತ್ತವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್

ನಿಂದ ಅತಿ ಹೆಚ್ಚು ಶಾಸಕರು ಕಾಂಗ್ರೆಸ್ ಗೆ ಬರುತ್ತಾರೆ. ಆದರೆ, ಯಾರು ಸಹ ಬಿಜೆಪಿ ತರ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಗೆ ಬರುತ್ತಾ ಇಲ್ಲ. ರಾಜ್ಯದಲ್ಲಿ ಒಳ್ಳೆ ಕೆಲಸಗಳನ್ನು ಕಾಂಗ್ರೆಸ್ ಪಕ್ಷ ಮಾಡುತ್ತಾ ಇದೆ ಎಂದು ಬರುತ್ತಿದ್ದಾರೆ ಎಂದು ಆಪರೇಷನ್ ಹಸ್ತ ವನ್ನ ಸಮರ್ಥಿಸಿಕೊಂಡರು.

ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಸಲುವಾಗಿ ಸಿದ್ದರಾಮಯ್ಯ ಒಳ್ಳೆಯಆಡಳಿತ ನೀಡುತ್ತಾ ಇದ್ದಾರೆ. ಹಾಗಾಗಿ ಕಾಂಗ್ರೆಸ್ ಗೆ ಬರುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Mysore ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷ; ನ.1 ರಿಂದ ವೈವಿಧ್ಯಮಯ ಕಾರ್ಯಕ್ರಮ

Advertisement

136 ಶಾಸಕರಿದ್ದೇವೆ ಕಾಂಗ್ರೆಸ್ ಸರ್ಕಾರ ಭದ್ರವಾಗಿದೆ. ಆದರೂ ನಮ್ಮ ಜೊತೆ ಬರ್ತಾ ಇದ್ದರೆ ಅಂದ್ರೆ ಕಾಂಗ್ರೆಸ್ ಗೆ ಶಕ್ತಿ ತುಂಬಲು ಬರುತ್ತಾ ಇದ್ದಾರೆ. ಬಿಜೆಪಿಗೆ ಹೋದವರು ಮಾತ್ರವಲ್ಲ  ಬಿಜೆಪಿಯಲ್ಲಿ ಇದ್ದವರು ಬರುತ್ತಾರೆ ಎನ್ನುವ ಮೂಲಕ ಕುತೂಹಲ ಮೂಡಿಸಿದರು.

ಬಿಜೆಪಿಯವರು ಆಪರೇಷನ್ ಮಾಡುವ ಸ್ಥಿತಿಯಲ್ಲೇ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಗಲ್ಲಿ ಗಲ್ಲಿ ತಿರುಗಿ ಪ್ರಚಾರ ನಡೆಸಿದರೂ ಬಿಜೆಪಿಯವರು 65 ಸೀಟು ಗೆದ್ದಿದ್ದಾರೆ. ನಾವು ಮನಸ್ಸು ಮಾಡಿ ಕರೆದರೆ ಬಿಜೆಪಿ ಜೊತೆಗೆ ಜೆಡಿಎಸ್ ಸಹ ಖಾಲಿ ಆಗುತ್ತದೆ ಎಂದು ಪುನರುಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next