Advertisement

ಖಂಡಿತವಾಗಿಯೂ ಮುಂದೊಂದು ದಿನ ನಿಮ್ಮನ್ನು ಭೇಟಿ ಮಾಡುವೆ : ರಶ್ಮಿಕಾ ಮಂದಣ್ಣ

01:50 PM Jun 27, 2021 | Team Udayavani |

ಬೆಂಗಳೂರು: ತಮ್ಮನ್ನು ಹುಡುಕಿಕೊಂಡು ಮನೆವರೆಗೆ ಬಂದು ನಿರಾಶೆಯಿಂದ ವಾಪಾಸ್ ಹೋಗಿರುವ ಅಭಿಮಾನಿಗೆ ನಟಿ ರಶ್ಮಿಕಾ ಮಂದಣ್ಣ, ಸಂದೇಶವೊಂದನ್ನು ನೀಡಿದ್ದಾರೆ. ಖಂಡಿತವಾಗಿಯೂ ಮುಂದೊಂದು ದಿನ ನಿಮ್ಮನ್ನು ಭೇಟಿಯಾಗುವೆ ಎಂದು ಭರವಸೆ ನೀಡಿದ್ದಾರೆ.

Advertisement

ಇತ್ತೀಚಿಗೆ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣಳನ್ನು ನೋಡಲು ಅಭಿಮಾನಿಯೊಬ್ಬ ಬರೋಬ್ಬರಿ 900 ಕಿ.ಮೀ ದೂರದಿಂದ ಕೊಡಗಿಗೆ ಬಂದಿದ್ದ. ತಮ್ಮ ಮೆಚ್ಚಿನ ನಟಿಯನ್ನು ನೋಡಲು ಅಭಿಮಾನಿ ಆಕಾಶ್ ತ್ರಿಪಾಟಿ ಎಂಬಾತ ತೆಲಂಗಾಣದಿಂದ ರೈಲಿನ ಮೂಲಕ ಮೈಸೂರಿಗೆ ಬಂದು ನಂತರ ಗೂಡ್ಸ್ ಗಾಡಿಯಲ್ಲಿ ವಿರಾಜಪೇಟೆಗೆ ಬಂದಿದ್ದ.

ಅಲ್ಲಿ ಮನೆ ಗೊತ್ತಾಗದೆ ಸಿಕ್ಕ ಸಿಕ್ಕವರನ್ನು ರಶ್ಮಿಕಾಳ ಮನೆಯನ್ನು ತಿಳಿಸುವಂತೆ ಕೇಳಿಕೊಂಡು ಅಲೆದಾಡಿದ್ದ. ಈತನ ವರ್ತನೆ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.  ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆಕಾಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಆಕಾಶ್ ತಾನು ತೆಲಂಗಾಣ ರಾಜ್ಯದವನಾಗಿದ್ದು ನಟಿ ರಶ್ಮಿಕಾಳನ್ನು ನೋಡುವ ಸಲುವಾಗಿ ಬಂದಿರುವುದಾಗಿ ಹೇಳಿದ್ದ. ಪೊಲೀಸರು ಆಕಾಶ್ ಗೆ ಬುದ್ದಿವಾದ ಹೇಳಿ ಮರಳಿ ಊರಿಗೆ ಹೋಗುವಂತೆ ತಿಳಿಸಿದ್ದಾರೆ. ಅದರಂತೆ ಆಕಾಶ್ ತೆಲಂಗಾಣಕ್ಕೆ ಮರಳಿದ್ದ.

ರಶ್ಮಿಕಾ ಟ್ವೀಟ್ :

ತನ್ನನ್ನು ನೋಡಲು ಅಭಿಮಾನಿ ದೂರದೂರಿನಿಂದ ಬಂದಿದ್ದ ವಿಚಾರ ತಿಳಿಯುತ್ತಲೆ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ. ಅಷ್ಟು ದೂರದಿಂದ ನನ್ನನ್ನು ಕಾಣಲು ಬಂದಿದ್ದೀರಿ. ಆದರೆ ನಿಮ್ಮನ್ನು ಭೇಟಿ ಆಗದಿರುವುದಕ್ಕೆ ವಿಷಾಧಿಸುತ್ತೇನೆ. ಮುಂದೊಂದು ದಿನ ನಿಮ್ಮನ್ನು ಭೇಟಿಯಾಗುವೆ ಎಂದು ನಾನು ಭಾವಿಸುತ್ತೇನೆ ಎಂದು ಟ್ವಿಟ್ಟಿಸಿದ್ದಾರೆ. ಹಾಗೂ ಇದೆ ವೇಳೆ ಅಭಿಮಾನಿಗಳಿಗೆ ಕಿವಿ ಮಾತು ಹೇಳಿರುವ ರಶ್ಮಿಕಾ, ನನ್ನ ಮೇಲೆ ನಿಮ್ಮೆ ಪ್ರೀತಿ ಇದೆ ರೀತಿ ಇರಲಿ. ಆದರೆ, ಹೀಗೆ ದೂರದಿಂದ ಕಷ್ಟಪಟ್ಟು ನನ್ನನ್ನು ಭೇಟಿಯಾಗುವ ತೊಂದರೆ ತೆಗೆದುಕೊಳ್ಳಬೇಡಿ ಎಂದಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next