Advertisement

ಆಗ್ರಾದ ‘ಕಾಂಜಿ ಬಡೇ ವಾಲೆ ಬಾಬಾ’ಕ್ಯಾನ್ಸರ್‌ನಿಂದ ನಿಧನ

10:02 PM Jun 13, 2021 | Team Udayavani |

ಆಗ್ರಾ: ಲಾಕ್‌ಡೌನ್‌ ಸಮಯದಲ್ಲಿ ಆರ್ಥಿಕ ಸಂಕಷ್ಟ ಸ್ಥಿತಿಯ ವಿಡಿಯೋ ವೈರಲ್‌ ಆಗಿ ಕರುಣೆ ಗಿಟ್ಟಿಸಿಕೊಂಡಿದ್ದ ಆಗ್ರಾದ “ಕಾಂಜಿ ಬಡೇ ವಾಲೆ ಬಾಬಾ'(ನಾರಾಯಣ ಸಿಂಗ್‌) ಭಾನುವಾರ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ.

Advertisement

ನಾರಾಯಣ ಸಿಂಗ್‌(90) ನಲವತ್ತು ವರ್ಷಗಳಿಂದ ಆಗ್ರಾದ ಕಮ್ಲಾನಗರದಲ್ಲಿ “ಕಾಂಜಿ ಬಡಾ’ ಅನ್ನು ತಿನಿಸನ್ನು ಸಾಸಿವೆ ಚಟ್ನಿಯೊಂದಿಗೆ ನೀಡುತ್ತಿದ್ದರು.

ನಾಲ್ಕು ತಿಂಗಳಿಂದ ತೀವ್ರ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸಿಂಗ್‌ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಂಗ್‌ ಅವರಿಗೆ ಸಂಬಂಧಿಸಿದ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸಿಂಗ್‌ ಪ್ರಸಿದ್ಧರಾಗಿದ್ದರು.

ಇದನ್ನೂ ಓದಿ: ರಕ್ಷಣಾ ಶಸ್ತ್ರಾಸ್ತ್ರ ತಯಾರಿಕಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಕ್ಕೆ ನಗದು ಬಹುಮಾನ

Advertisement

Udayavani is now on Telegram. Click here to join our channel and stay updated with the latest news.

Next