Advertisement

Kaniyoor: ವ್ಯಕ್ತಿ ನಾಪತ್ತೆ; ಹೊಳೆಗೆ ಬಿದ್ದಿರುವ ಶಂಕೆ

11:26 PM Jul 16, 2024 | Team Udayavani |

ಕಾಣಿಯೂರು: ಕಡಬ ತಾಲೂಕಿನ ಕಾಯಿಮಣ ಗ್ರಾಮದ ನಾಯಿತಡ್ಕ ನಿವಾಸಿ ಹುಕ್ರ ಅವರ ಪುತ್ರ ಸುರೇಶ (40) ನಾಪತ್ತೆಯಾಗಿದ್ದು, ಅವರು ಹೊಳೆಗೆ ಬಿದ್ದಿರುವ ಶಂಕೆಯಿಂದ ಹುಡುಕಾಟ ನಡೆಸಲಾಗುತ್ತಿದೆ. ವಿಪರಿತ ಮದ್ಯಪಾನದ ಚಟ ಹೊಂದಿದ್ದ ಅವರು ಕೆಲಸಕ್ಕೂ ಸರಿ ಯಾಗಿ ಹೋಗುತ್ತಿರಲಿಲ್ಲ.

Advertisement

ಇತ್ತೀ ಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿ ಯಾರೊಂದಿಗೂ ಹೆಚ್ಚಾಗಿ ಮಾತ ನಾಡುತ್ತಿರಲಿಲ್ಲ. ಸೋಮ ವಾರ ರಾತ್ರಿ 8.30ರ ವೇಳೆಗೆ ಮನೆಯಿಂದ ಹೊರ ಹೋಗಿದ್ದು, ಇನ್ನೂ ಪತ್ತೆಯಾಗಿಲ್ಲ. ಈ ನಡುವೆ ಕಾಪೆಜಾಲು ಹೊಳೆ ಬದಿಯಲ್ಲಿ ಅವರ ಶರ್ಟ್‌ ಮತ್ತು ಕೊಡೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದವರು ಸಾಕಷ್ಟು ಹುಡುಕಿದರೂ ಪತ್ತೆಯಾಗಿಲ್ಲ.

ಸ್ಥಳಕ್ಕೆ ಕಡಬ ತಹಶೀಲ್ದಾರ್‌ಪ್ರಭಾಕರ್‌ಖಜೂರೆ ಸಹಿತ ಕಂದಾಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next