Advertisement

ಕಾಣೆಯಾದವಳ ಹುಡುಕಾಟದಲ್ಲಿ ಹೊಸಬರು

04:15 PM Feb 19, 2023 | Team Udayavani |

ಕಾಣೆಯಾಗಿದ್ದಾಳೆ ಹುಡುಕಿಕೊಟ್ಟವರಿಗೆ ಬಹುಮಾನ’ ಹೀಗೊಂದು ವಿಭಿನ್ನ ಶೀರ್ಷಿಕೆಯ ಚಿತ್ರ ಸದ್ದಿಲ್ಲೇ ತನ್ನ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ದವಾಗಿದೆ.

Advertisement

“ಶ್ರೀಮೈಲಾರಲಿಂಗೇಶ್ವರ ಸಿನಿಮಾಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ, “ಕಾಣೆಯಾಗಿದ್ದಾಳೆ ಹುಡುಕಿಕೊಟ್ಟವರಿಗೆ ಬಹುಮಾನ’ ಚಿತ್ರಕ್ಕೆ ಆರ್‌. ಕೆ ನಿರ್ದೇಶನವಿದೆ. ಸದ್ಯ ನಿಧಾನವಾಗಿ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಂದಿದ್ದು, ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿತು.

“ಇದೊಂದು ನೈಜ ಘಟನೆಯಿಂದ ಸ್ಫೂರ್ತಿ ಪಡೆದುಕೊಂಡು ಮಾಡಿರುವ ಕಾಲ್ಪನಿಕ ಸಿನಿಮಾ. ಐಎಎಸ್‌ ಆಗಬೇಕೆಂಬ ಕನಸನ್ನು ಹೊತ್ತ ಹುಡುಗಿಯೊಬ್ಬಳು ನಗರಕ್ಕೆ ಬಂದು ಕಣ್ಮರೆಯಾಗುತ್ತಾಳೆ. ಆನಂತರ ಆಕೆಯ ಜೀವನದಲ್ಲಿ ಏನೆಲ್ಲ ಆಗುತ್ತದೆ ಎಂಬುದು ಸಿನಿಮಾದ ಕಥೆಯ ಒಂದು ಎಳೆ’ ಎಂಬುದು ಚಿತ್ರದ ನಿರ್ದೇಶಕ ಆರ್‌. ಕೆ ನೀಡುವ ವಿವರಣೆ.

ಯುವ ನಟ ವಿನಯ್‌ ಕಾರ್ತಿ ಈ ಚಿತ್ರದಲ್ಲಿ ನಾಯಕನಾಗಿ, ತೆಲುಗಿನ ಬಿಗ್‌ಬಾಸ್‌ ಸ್ಪರ್ಧಿ ಕೀರ್ತಿ ಭಟ್‌ ನಾಯಕಿಯಾಗಿ ಕಾಣಿಸಿಕೊಂಡಿರುವ “ಕಾಣೆಯಾಗಿದ್ದಾಳೆ ಹುಡುಕಿಕೊಟ್ಟವರಿಗೆ ಬಹುಮಾನ’ ಸಿನಿಮಾದಲ್ಲಿ ಅಂಜನ, ಶಿವಕುಮಾರ್‌ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next