Advertisement

ಕನ್ಹಯ್ಯ ಕುಮಾರ್ ಮತ್ತೊಂದು ಕಾರ್ಯಕ್ರಮವೂ ರದ್ದು; ಪೊಲೀಸ್ ಭದ್ರತೆ

09:36 AM Oct 16, 2019 | keerthan |

ಕಲಬುರಗಿ: ನಗರದಲ್ಲಿ ನಡೆಯಬೇಕಿದ್ದ ಕನ್ಹಯ್ಯ ಕುಮಾರ್ ಭಾಷಣದ ಎರಡನೇ ಕಾರ್ಯಕ್ರಮವೂ ರದ್ದು ಮಾಡಲಾಗಿದೆ. ‌

Advertisement

ಗುಲಬರ್ಗಾ ವಿಶ್ವವಿದ್ಯಾಲಯದ ರದ್ದಾಗಿದ್ದ ಹಿನ್ನೆಲೆಯಲ್ಲಿ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಕನ್ಹಯ್ಯ ಭಾಷಣಕ್ಕೆ ಸಿದ್ಧತೆ ಮಾಡಲಾಗಿತ್ತು. ಆದರೆ, ಭವನದಲ್ಲಿ ಕಾರ್ಯಕ್ರಮ ನಡೆಸಲು ಪೊಲೀಸ್ ಅನುಮತಿ ಪಡೆದಿರಲಿಲ್ಲ.

ಹೀಗಾಗಿ ಕಾರ್ಯಕ್ರಮಕ್ಕೆ ಪೊಲೀಸ್ ಆಕ್ಷೇಪ ವ್ಯಕ್ತಪಡಿಸಿದರು. ಆಯೋಜಕರನ್ನು ಭೇಟಿ ಮಾಡಿ ಕಾರ್ಯಕ್ರಮ ರದ್ದು ಪಡಿಸಿ ಎಂದು ಸೂಚಿಸಿದರು. ಅದ್ದರಿಂದ ಅನಿವಾರ್ಯವಾಗಿ ಕಾರ್ಯಕ್ರಮ ಮಾಡಲಾಯಿತು. ಅಲ್ಲದೇ, ಭವನದಲ್ಲಿ ಸೇರಿದ್ದ ಜನರು ವಾಪಸ್ ಮರಳಿದರು.

ಇನ್ನೊಂದೆಡೆ ಸಂಜೆ 4 ಗಂಟೆಗೆ ಅಂಬೇಡ್ಕರ್ ಕಾಲೇಜು ಆವರಣದಲ್ಲಿ ಕನ್ಹಯ್ಯ ಕುಮಾರ್ ಕಾರ್ಯಕ್ರಮ ನಿಗದಿಯಾಗಿದೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಪೊಲೀಸ್ ಅನುಮತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next