Advertisement

ಕಲಬುರಗಿ: ಇಂದು ನಡೆಯಬೇಕಿದ್ದ ಕನ್ಹಯ್ಯ ಕುಮಾರ್ ಉಪನ್ಯಾಸ ರದ್ದು  

09:46 AM Oct 16, 2019 | keerthan |

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ  ಇಂದು ನಡೆಯಬೇಕಿದ್ದ ಯುವ ಮುಖಂಡ ಕನ್ಹಯ್ಯ ಕುಮಾರ್ ಉಪನ್ಯಾಸ ರದ್ದು ಮಾಡಲಾಗಿದೆ.

Advertisement

ವಿವಿಯ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಇಂದು ‘ಅಂಬೇಡ್ಕರ್ ಕಂಡ ಆಧುನಿಕ ಭಾರತದಲ್ಲಿ ಯುವಕರ ಪಾತ್ರ ಕುರಿತು ಕನ್ಹಯ್ಯ ಕುಮಾರ ಉಪನ್ಯಾಸ ನೀಡಬೇಕಿತ್ತು.

ಕನ್ಹಯ್ಯ ಉಪನ್ಯಾಸಕ್ಕೆ ಶ್ರೀರಾಮಸೇನೆ ಮತ್ತು ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ನಿನ್ನೆ  ಹಂಗಾಮಿ ಕುಲಪತಿ ಪ್ರೊ.ಪರಿಮಳಾ ಅಂಬೇಕರ್ ಸಿಡಿಂಕೇಟ್ ಸಭೆ ನಡೆಸಿ, ಕನ್ಹಯ್ಯ ವಿಷಯದ ಬಗ್ಗೆ ಮಾತ್ರವೇ ಮಾತನಾಡಬೇಂದು ಹೇಳಿ ಅನುಮತಿ ನೀಡಿದ್ದರು.

ಆದರೆ, ಕನ್ಹಯ್ಯ ಉಪನ್ಯಾಸ ವಿಷಯ ರಾಜ್ಯಪಾಲರಿಗೆ ಮುಟ್ಟಿದ್ದು, ಕಾರ್ಯಕ್ರಮ ರದ್ದು ಪಡಿಸುವಂತೆ ಕುಲಪತಿಗಳಿಗೆ ಮೌಖಿಕ ಆದೇಶ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.‌

Advertisement

Udayavani is now on Telegram. Click here to join our channel and stay updated with the latest news.

Next