Advertisement

Bollywood: ʼತೇಜಸ್‌ʼ ಸಿನಿಮಾ ನೋಡಿ ಯೋಗಿ ಆದಿತ್ಯನಾಥ್‌ ಭಾವುಕರಾದರು.. ನಟಿ ಕಂಗನಾ

06:09 PM Oct 31, 2023 | Team Udayavani |

ಲಕ್ನೋ: ನಟಿ ಕಂಗನಾ ರಣಾವತ್‌ ಅವರ ʼತೇಜಸ್‌ʼ ಸಿನಿಮಾ ಇತ್ತೀಚೆಗೆ ತೆರೆಕಂಡಿದೆ. ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ʼತೇಜಸ್‌ʼ ಸಿನಿಮಾದ ವಿಶೇಷ ಪ್ರದರ್ಶನವನ್ನು ಚಿತ್ರತಂಡ ಆಯೋಜಿಸಿದ್ದು, ಸಿನಿಮಾವನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಅವರು ಮೆಚ್ಚಿಕೊಂಡಿದ್ದಾರೆ ಎಂದು ಕಂಗನಾ ಹೇಳಿದ್ದಾರೆ.

Advertisement

ನಟಿ ಕಂಗನಾ ಅವರ ʼತೇಜಸ್‌ʼ ಸಿನಿಮಾದ ವಿಶೇಷ ಸ್ಕ್ರೀನಿಂಗ್‌ ನ್ನು ಲಕ್ನೋದ ಲೋಕಭವನ ಸಭಾಂಗಣದಲ್ಲಿ ಮಂಗಳವಾರ(ಅ.31 ರಂದು) ಆಯೋಜಿಸಲಾಗಿತ್ತು. ಇದರಲ್ಲಿ ಯುಪಿ ಸಿಎಂ ಆದಿತ್ಯನಾಥ್‌,ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

ಸಿನಿಮಾವನ್ನು ನೋಡಿ ಆದಿತ್ಯನಾಥ್‌ ಅವರು ಭಾವುಕರಾದರು ಎಂದು ನಟಿ ಕಂಗನಾ ಹೇಳಿದ್ದಾರೆ. ಈ ಬಗ್ಗೆ ʼಎಎನ್‌ ಐʼ ಜೊತೆ ಮಾತನಾಡಿದ ಅವರು, “ಯೋಗಿ ಆದಿತ್ಯನಾಥ್‌ ಅವರು ʼತೇಜಸ್‌ʼ ಸಿನಿಮಾವನ್ನು ಇಷ್ಟಪಟ್ಟರು. ಚಿತ್ರ ರಾಷ್ಟ್ರೀಯವಾದವನ್ನು ಸಂಪರ್ಕಿಸಲು ಪ್ರೇರೇಪಿಸುವುದಾಗಿ ಹೇಳಿದರು. ಯೋಗಿ ಆದಿತ್ಯನಾಥ್‌ ಅವರು ಸಿನಿಮಾ ನೋಡುವಾಗ ಭಾವುಕರಾದರು. ಅವರು ಕಣ್ಣೀರನ್ನು ತಡೆಯಲು ಆಗಿಲ್ಲ. ಅವರು ನಮ್ಮನ್ನು ಮತ್ತು ನಮ್ಮ ಚಲನಚಿತ್ರವನ್ನು ನಮ್ಮ ಎಲ್ಲಾ ಶತ್ರುಗಳು ಮತ್ತು ದೇಶವಿರೋಧಿ ಅಂಶಗಳಿಂದ ರಕ್ಷಿಸುವುದಾಗಿ, ಸಿನಿಮಾ ನೋಡಲು ರಾಷ್ಟ್ರೀಯವಾದಿಗಳನ್ನು ಪ್ರೇರೇಪಿಸುವುದಾಗಿ ಅವರು ಹೇಳಿದರು” ಎಂದು ನಟಿ ಹೇಳಿದ್ದಾರೆ.

ʼತೇಜಸ್’ ಸಿನಿಮಾವನ್ನು ಶಾಲಾ-ಕಾಲೇಜುಗಳಲ್ಲಿ ಪ್ರದರ್ಶಿಸಬೇಕು. ಇದರಿಂದ ಭಾರತೀಯ ವಾಯುಪಡೆಯ ಬಗ್ಗೆ ಹೆಮ್ಮೆಯ ಭಾವನೆ ಯುವಜನರ ಮನಸ್ಸಿನಲ್ಲಿ ಮೂಡುತ್ತದೆ ಎಂದು ಕಂಗನಾ ಹೇಳಿದ್ದಾರೆ.

ಸರ್ವೇಶ್ ಮೇವಾರ ನಿರ್ದೇಶನದ ʼತೇಜಸ್‌ʼ ಸಿನಿಮಾಕ್ಕೆ ನಿರೀಕ್ಷೆಗೆ ತಕ್ಕ ಪ್ರತಿಕ್ರಿಯೆ ಕೇಳಿ ಬರುತ್ತಿಲ್ಲ. ಇದುವರೆಗೆ ಸಿನಿಮಾ 4.25 ಕೋಟಿ ರೂ.ವನ್ನು ಮಾತ್ರಗಳಿಸಿದೆ.

Advertisement

ಕಂಗನಾ ಜೊತೆ ಸಿನಿಮಾದಲ್ಲಿ ಅಂಶುಲ್ ಚೌಹಾಣ್, ವರುಣ್ ಮಿತ್ರ, ಆಶಿಶ್ ವಿದ್ಯಾರ್ಥಿ, ವಿಶಾಕ್ ನಾಯರ್, ಕಶ್ಯಪ್ ಶಂಗಾರಿ, ಸುನಿತ್ ಟಂಡನ್, ರಿಯೊ ಕಪಾಡಿಯಾ, ಮೋಹನ್ ಅಗಾಶೆ ಮತ್ತು ಮುಷ್ತಾಕ್ ಕಾಕ್ ಮುಂತಾದವರು ನಟಿಸಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next