Advertisement

ಕೆಂಡ ಹಾಯ್ದ ಮಲ್ಲಿಕಾರ್ಜುನ್‌

10:24 AM Apr 19, 2019 | Sriram |

ದಾವಣಗೆರೆ: ಪ್ರತಿ ವರ್ಷದಂತೆ ಈ ವರ್ಷವೂ ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಹಳೇಪೇಟೆ ಶ್ರೀ ವೀರಭದ್ರೇಶ್ವರ ಕೆಂಡ ಹಾಯುವ ಮೂಲಕ ಗಮನ ಸೆಳೆದರು.

Advertisement

ಹಳೇಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವದ ಮುನ್ನಾ ದಿನ ಅಗ್ನಿಕುಂಡ ಹಾಯುವುದು ಸಂಪ್ರದಾಯ. ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಪ್ರತಿ ವರ್ಷ ಅಗ್ನಿಕುಂಡ ಹಾಯುವುದು ನಡೆದುಕೊಂಡುಬಂದಿದೆ. ಎಷ್ಟೇ ಕೆಲಸದ ಒತ್ತಡವೇ ಇರಲಿ, ಎಲ್ಲಿಯೇ ಇರಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ, ವಿಧಾನ ಸಭೆ, ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿದ್ದರೂ ಹಳೇಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ಕೆಂಡ ಹಾಯುವುದನ್ನು ಮಾತ್ರ ಮಲ್ಲಿಕಾರ್ಜುನ್‌ ತಪ್ಪಿಸುವುದೇ ಇಲ್ಲ. ಏ.23ರಂದು ನಡೆಯುವ ಲೋಕಸಭಾ ಚುನಾವಣಾ ಪ್ರಚಾರದ ಒತ್ತಡದ ನಡುವೆಯೂ ಗುರುವಾರ ಬೆಳಗ್ಗೆ ತಮ್ಮ ಮಗಳು ಶ್ರೇಷ್ಠಾ ಜತೆ ಕೆಂಡ ಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next