Advertisement

ಕನಕಮಜಲು: ಅಂಗಡಿಯಿಂದ ಗ್ಯಾಸ್‌ ಸಿಲಿಂಡರ್‌, ನಗದು ಕಳವು

09:06 PM Mar 13, 2023 | Team Udayavani |

ಸುಳ್ಯ: ಕನಕಮಜಲಿನ ಅಡಿಕೆ ಅಂಗಡಿಯೊಂದಕ್ಕೆ ನುಗ್ಗಿ ಕಳವಿಗೆ ಯತ್ನಿಸಿ, ಬಳಿಕ ಸಮೀಪದ ಅಂಗಡಿಯಿಂದ ಗ್ರಾಹಕರು ತಂದಿರಿಸಿದ್ದ ಐದು ಗ್ಯಾಸ್‌ ಸಿಲಿಂಡರ್‌ ಹಾಗೂ ಅಂಗಡಿಯಲ್ಲಿದ್ದ ಹತ್ತು ಸಾವಿರ ರೂ. ನಗದು ಕಳವುಗೈದ ಘಟನೆ ಮಾ. 11ರಂದು ರಾತ್ರಿ ನಡೆದಿದೆ.

Advertisement

ಕನಕಮಜಲಿನ ಭಾರತ್‌ ಸುಳಾರಿ ಟ್ರೇಡರ್ಸ್‌ಗೆ ಮಧ್ಯರಾತ್ರಿ 2 ಗಂಟೆಗೆ ಬಂದ ಇಬ್ಬರು ಕಳ್ಳರು ಬೀಗ ಒಡೆದಿದು, ಅಂಗಡಿಯ ಸೈಡ್‌ ಲಾಕರ್‌ ಹಾಗೂ ಸೆಂಟರ್‌ ಲಾಕರ್‌ ಮುರಿಯಲು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ಈ ವೇಳೆ ಪಕ್ಕದಲ್ಲಿರುವ ತೀರ್ಥರಾಮ ಸಾರಕೂಟೇಲು ಅವರ ಅಂಗಡಿಯ ಬೀಗ ಒಡೆದು, ಗ್ರಾಹಕರು ಅಂಗಡಿಯಲ್ಲಿ ತಂದಿರಿಸಿದ್ದ ಐದು ಗ್ಯಾಸ್‌ ಸಿಲಿಂಡರ್‌ ಹಾಗೂ ಡ್ರಾವರ್‌ನಲ್ಲಿಟ್ಟಿದ್ದ ಹತ್ತು ಸಾವಿರ ನಗದು ಕಳವುಗೈದಿದ್ದಾರೆ.

ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಕಳವು ಕೃತ್ಯ ನಡೆಸಿದ್ದು ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಭಾರತ್‌ ಸುಫಾರಿ ಟ್ರೇಡರ್ಸ್‌ನಿಂದ ಈ ಹಿಂದೆಯೂ ಎರಡು ಬಾರಿ ಅಡಿಕೆ ಹಾಗೂ ನಗದು ಕಳವುಗೈದ ಘಟನೆ ನಡೆದಿದೆ. ತೀರ್ಥರಾಮ ಅವರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ಧಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next