Advertisement

ಕನಕಗಿರಿ : ಕಾಲು ಜಾರಿ ಬಾವಿಗೆ ಬಿದ್ದು ಪೊಲೀಸ್ ಪೇದೆ ಸಾವು

08:23 AM Sep 24, 2022 | Team Udayavani |

ಕನಕಗಿರಿ: ಪಟ್ಟಣದ ಪೋಲಿಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ, ಶಿವಪುತ್ರಪ್ಪ ಗುಳೇದಗುಡ್ಡ(೪೦) ಸ್ಥಳೀಯ ಐತಿಹಾಸಿಕ ಸ್ಮಾರಕ ವೆಂಕಟಪತಿ ಬಾವಿಯಲ್ಲಿ ಬಿದ್ದು ಸಾವನ್ನೊಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

Advertisement

ಎ.ಪಿ.ಎಂ.ಸಿ ಆವರಣದಲ್ಲಿರುವ ವೆಂಕಟಪತಿ ಬಾವಿಯ ಕಡೆ ಸಾಯಂಕಾಲ ವಿಶ್ರಾಂತಿ ಪಡೆಯಲು ತೆರಳಿದಾಗ ಆಯಾತಪ್ಪಿ ಬಾವಿಗೆ ಬಿದ್ದಿದ್ದು, ಅಲ್ಲಿನ ಕೂಲಿ ಕಾರ್ಮಿಕರು ಪೋಲಿಸ್ ಪೇದೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಪೋಲಿಸ್ ವರಿಷ್ಠಾಧಿಕಾರಿ ಅರುಣಾಂಶು ಗಿರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾತ್ವಂನ ಹೇಳಿ, ಹೆಚ್ಚಿನ ಮಾಹಿತಿಗಾಗಿ ಸ್ಥಳವನ್ನು ಪರಿಶೀಲನೆ ಮಾಡಿದರು.

ಇದನ್ನೂ ಓದಿ : ಯುವತಿಯ ಹತ್ಯೆ ಪ್ರಕರಣ : ಉತ್ತರಾಖಂಡ್ ಬಿಜೆಪಿ ನಾಯಕನ ಪುತ್ರ ಸೇರಿ ಮೂವರ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next