Advertisement

Kanakagiri:ಮೆಣಸಿನಕಾಯಿಯೊಂದಿಗೆ ಗಂಜಾ ಗಿಡಗಳನ್ನೂ ಬೆಳೆಯುತ್ತಿದ್ದ ಆರೋಪಿ ಬಂಧನ

11:46 PM Nov 19, 2023 | Team Udayavani |

ಕನಕಗಿರಿ: ತಾಲೂಕಿನ ಸಮೀಪದ ವಡಕಿ ಗ್ರಾಮದಲ್ಲಿ ಸಸಿಗಳ ಜೊತೆಗೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.

Advertisement

ಬಂಧಿತ ಆರೋಪಿ ಬಸವರಾಜ ಮುಳದಿನ್ನಿ ಎಂಬಾತನಾಗಿದ್ದಾನೆ. ಮೆಣಸಿನಕಾಯಿ ಗಿಡದ ಜೊತೆಯಲ್ಲಿ ಸುಮಾರು 60 ಹಸಿ ಗಂಜಾ ಗಿಡಗಳನ್ನು ಬೆಳೆಸಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕನಕಗಿರಿ ಪೊಲೀಸರು ವಶಕ್ಕೆ ತೆಗೆದುಕೊಂಡರು.

ಪಂಚನಾಮೆ ನಡೆಸಿ, ಇದರ ಅಂದಾಜು ಮೌಲ್ಯ 30000 ಸಾವಿರ ರೂ. ಆಗಿದೆ. ಪ್ರಕರಣ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next