Advertisement

ಕಾರಹುಣ್ಣಿಮೆ ಆಚರಣೆಗೆ ಕೋವಿಡ್ ಕರಿನೆರಳು

06:30 PM Jun 07, 2020 | Naveen |

ಕಂಪ್ಲಿ: ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಕಾರಹುಣ್ಣಿಮೆಯಂದು ರೈತರು ತಮ್ಮ ಎತ್ತುಗಳನ್ನು ಶೃಂಗರಿಸುವುದಕ್ಕೆ ಮಾತ್ರ ಸೀಮಿತಗೊಳಿಸಿದರು. ಎತ್ತುಗಳನ್ನು ಸ್ವಚ್ಛವಾಗಿ ತೊಳೆದು ಅವುಗಳ ಕೋಡು(ಕೊಂಬು)ಗಳನ್ನು ಕೆತ್ತಿಸಿ ಅವುಗಳಿಗೆ ಕೋಡಣಸು, ಗಗ್ರಿಗಳನ್ನು ಜೋಡಿಸಿ ನಂತರ ಗ್ರಾಮದಲ್ಲಿ ಮೊದಲಿನಿಂದಲೂ ಬಣ್ಣ ಹಚ್ಚುವವರ ಹತ್ತಿರ ಎತ್ತಿನ ಕೋಡುಗಳಿಗೆ ವೈವಿಧ್ಯಮಯ ಬಣ್ಣಗಳಿಂದ ವಿವಿಧ ಚಿತ್ರಗಳನ್ನು ಬಿಡಿಸಿದ್ದರು.

Advertisement

ಎತ್ತುಗಳ ಕೋಡುಗಳ ಮೇಲೆ ಮದುವೆ ಸಂದರ್ಭದಲ್ಲಿ ಉಪಯೋಗಿಸುವ ಬಾಸಿಂಗದ ಚಿತ್ರವನ್ನು ಬಿಡಿಸಿದ್ದು ಸಾಮಾನ್ಯವಾಗಿತ್ತು. ನವಿಲು ಮತ್ತು ಗಿಳಿಗಳ ಚಿತ್ರಗಳನ್ನು ಬಿಡಿಸಲಾಗಿತ್ತು. ಹೀಗೆ ಬಣ್ಣಗಳಿಂದ ಶೃಂಗರಿಸಿದ ಎತ್ತುಗಳನ್ನು ಮನೆಗೆ ಹೊಡೆದುಕೊಂಡು ಬಂದು ಮನೆಯ ಎತ್ತುಗಳ ಗ್ವಾದಲಿಯಲ್ಲಿ ಅವುಗಳನ್ನು ಕಟ್ಟಿ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅಕ್ಕಿ ಬೆಲ್ಲ ಮತ್ತು ಹೋಳಿಗೆಯನ್ನು ನೈವೇದ್ಯ ಮಾಡಿ ಅದನ್ನು ಅವುಗಳಿಗೆ ತಿನ್ನಿಸಿದರು.

ಸಂಜೆ ಎತ್ತುಗಳನ್ನು ಗೆಜ್ಜೆ, ಗೊಂಡೇವುಗಳಿಂದ ಶೃಂಗರಿಸಿ ಗ್ರಾಮದ ಅಗಸೆ ಬಾಗಿಲಿನಲ್ಲಿ ಊರ ಬುಡ್ಡೆ ಕಲ್ಲಿನ ಹತ್ತಿರ ಎತ್ತುಗಳನ್ನು ಕರಿ ಬಿಡುತ್ತಾರೆ. ಆದರೆ ಕೋವಿಡ್ ಒಕ್ಕರಿಸಿರುವುದರಿಂದ ರೈತರು ತಮ್ಮ ಎತ್ತುಗಳನ್ನು ಕೇವಲ ಶೃಂಗರಿಸಿ ಪೂಜೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next