Advertisement

Kalayanapura: ಶ್ವಾನಗಳಿಗೆ ವಿಷ ಪ್ರಾಶನ ಮಾಡಿ ಹತ್ಯೆ

07:04 PM Aug 20, 2023 | Team Udayavani |

ಮಲ್ಪೆ: ಕಲ್ಯಾಣಪುರ ನೇಜಾರು ಮೂಡುಬೆಟ್ಟು ಪರಿಸರದಲ್ಲಿ ವಿಕೃತ ಮನಸ್ಸಿನ ಕೆಲವರು ಮೂಕ ಪ್ರಾಣಿಗಳಿಗೆ ವಿಷ ಉಣಿಸಿ ಹತ್ಯೆ ಮಾಡಿರುವ ಬಗ್ಗೆ ಸ್ಥಳೀಯ ನಿವಾಸಿ ಕ್ಯಾನಿಸ್‌ ಮಥಾಯಸ್‌ ದೂರಿದ್ದಾರೆ.

Advertisement

ಸಾಮೂಹಿಕವಾಗಿ ಅಡ್ಡಾಡುವಾಗ ಊಟದಲ್ಲಿ ವಿಷ ಬೆರೆಸಿ ಈಗಾಗಲೇ 6 ಶ್ವಾನಗಳನ್ನು ಕೊಂದು ಹಾಕಿದ್ದಾರೆ. ಬೆಕ್ಕು ಮತ್ತು ಗಿಡುಗಗಳು ಒಂದರ ಮೇಲೊಂದರಂತೆ ಸಾವನ್ನಪ್ಪುತ್ತಿದೆ. ಇವುಗಳಲ್ಲಿ ಒಂದು ಶ್ವಾನವನ್ನು ರಕ್ಷಿಸಿ ಸಾಲಿಗ್ರಾಮದ ಪ್ರಾಣಿದಯಾ ಕೇಂದ್ರಕ್ಕೆ ನೀಡಲಾಗಿದೆ.

ಮೂಕ ಜೀವಿಗಳ ಮೇಲೆ ಇಂತಹ ಕ್ರೌರ್ಯ ತೋರಿಸುವವುದು ಸರಿಯಲ್ಲ. ಶ್ವಾನಗಳಿಗೆ ವಿಷ ಹಾಕಿರುವ ನಿರ್ದಯಿಗಳನ್ನು ತತ್‌ಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕ್ಯಾನಿಸ್‌ ಮಥಾಯಸ್‌ ಮನವಿ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next