Advertisement

ಕಲಬುರಗಿ: ವೈದ್ಯಕೀಯ ಕಾಲೇಜಿಗೆ ದೇಹ ಬರೆದು ಕೊಟ್ಟ ದಂಪತಿ

01:27 PM Dec 29, 2020 | keerthan |

ಕಲಬುರಗಿ: ಬಿಜೆಪಿ ಕಲಬುರಗಿ ಜಿಲ್ಲಾ ಮಾಧ್ಯಮ ಪ್ರಮುಖ ಅರುಣ್ ಕುಮಾರ್ ಕುಲಕರ್ಣಿ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಜೈನಾಪುರ ಅವರು ಮಂಗಳವಾರ ತಮ್ಮ ದೇಹದಾನ ಮಾಡಿದರು. ಇಲ್ಲಿನ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿಗೆ ತಮ್ಮ ದೇಹವನ್ನು ಬರೆದು ಕೊಟ್ಟರು.

Advertisement

ಅರುಣ್ ಕುಮಾರ್ ಮತ್ತು ಪತ್ನಿ ವಿಜಯಲಕ್ಷ್ಮಿ ಇಬ್ಬರೂ ಸ್ವಇಚ್ಛೆಯಿಂದ ವೈದ್ಯಕೀಯ ಕಾಲೇಜಿಗೆ ದೇಹದಾನ ವಿಧೇಯಕ ಪತ್ರ ಬರೆದು ಕೊಟ್ಟರು. ಸುಮಾರು ಏಳು ವರ್ಷಗಳಿಂದ ದೇಹದಾನದ ಬಗ್ಗೆ ಯೋಜನೆ ಮಾಡಿದ್ದೆ. ಇಂದು ನನ್ನ 54ನೇ ಜನ್ಮದಿನವಾಗಿದ್ದು, ಈ ದಿನವೇ ಸೂಕ್ತವೆಂದು ಇಬ್ಬರೂ ದೇಹದಾನ ತೀರ್ಮಾನ ಮಾಡಿದ್ದೇವೆ ಎಂದು ಅರುಣ್ ಕುಮಾರ್ ತಿಳಿಸಿದರು.

ಕುಟುಂಬದೊಂದಿಗೆ ಚರ್ಚಿಸಿಯೇ ಈ ನಿರ್ಧಾರ ಮಾಡಿದ್ದೇವೆ. ಪತ್ನಿ ವಿಜಯಲಕ್ಷ್ಮಿ ಕೃಷಿ ಇಲಾಖೆಯ ನೌಕರರು ಆಗಿದ್ದಾರೆ. ಮಗಳು ಎಂಬಿಬಿಎಸ್ ಮಾಡುತ್ತಿದ್ದು, ಮಗ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಮಕ್ಕಳು ಸಮ್ಮತಿಸಿದ್ದಾರೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next