Advertisement

ಕಲ್ಮಕಾರು ಬಿಜೆಪಿ ಮುಂದಾಳು ಮಹೇಶ್ ಕೆ.ಪಿ ಹ್ರದಯಘಾತದಿಂದ ಸಾವು

10:05 AM Dec 09, 2019 | Team Udayavani |

ಸುಬ್ರಹ್ಮಣ್ಯ ; ಕಲ್ಮಕಾರು ಗ್ರಾಮದ ನಿವಾಸಿ ಮಹೇಶ್ ಕೆ.ಪಿ (ಮಾರಿಮುತ್ತು) (47) ರವಿವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ ಈ ಹಿಂದೆ ಹ್ರದಯದ ಶಸ್ತ್ರ ಚಿಕಿತ್ಸೆ ಆಗಿತ್ತು. ಸಂಜೆ ವೇಳೆಗೆ ಅವರು ಮ್ರತರಾದರು. ಮೃತರು ಪತ್ನಿ ಮತ್ತು ಎರಡು ಮಂದಿ ಎಳೆ ವಯಸ್ಸಿನ ಪುತ್ರರನ್ನು ಅಗಲಿದ್ದಾರೆ.

Advertisement

ಮಹೇಶ್ ಅವರು ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು. ಕಲ್ಮಕಾರು ಬಿಜೆಪಿ ಶಕ್ತಿ ಕೇಂದ್ರದ ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಸಾಮಾಜಿಕ.ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು ಹಿಂದಿನ ವರ್ಷ ಹಾಗೂ ಇತ್ತೀಚೆಗೆ ಕಲ್ಮಕಾರು ಭಾಗದಲ್ಲಿ ಸಂಭವಿಸಿದ ಪ್ರಾಕ್ರತಿಕ ವಿಕೋಪದ ಸಂದರ್ಭ ಸಂತ್ರಸ್ಥರ ಸ್ಥಳಾಂತರ ಇತ್ಯಾದಿ ಕೆಲಸಗಳಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next