Advertisement

ಕುಸಿಯುತ್ತಿದೆ ಕುಷ್ಟಗಿ ಕಲ್ಲಬಾವಿ ರಕ್ಷಾ ಗೋಡೆ  

07:21 PM Feb 09, 2021 | Team Udayavani |

ಕುಷ್ಟಗಿ: ಐತಿಹಾಸಿಕ ಸ್ಮಾರಕವಾಗಿದ್ದ ಕಲ್ಲುಬಾವಿ ಚರಂಡಿ ನೀರು ತುಂಬಿ ಬೃಹತ್‌ ಚರಂಡಿ ಗುಂಡಿಯಾಗಿ ವಿರೂಪಗೊಂಡಿರುವುದು ಒಂದೆಡೆಯಾದರೆ, ಈ ಕಲ್ಲಬಾವಿಯ ರಕ್ಷಾ ಗೋಡೆ ಕುಸಿದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

Advertisement

ವಿಜಯಪುರದ ಸುಲ್ತಾನ್‌ ಅಲಿ ಆದಿಲ್‌ ಶಾ ವಿಜಯ ನಗರದ ಮೇಲೆ ದಂಡೆತ್ತಿ ಹೋಗುವಾಗ ಕುದರೆ, ಒಂಟೆ, ಆನೆಗಳ ಬಿಡಾರಕ್ಕಾಗಿ ಈ ಪ್ರದೇಶದಲ್ಲಿ ಕಲಾತ್ಮಕ ಬಾವಿ ನಿರ್ಮಿಸಲಾಗಿದೆ ಎಂಬ ಇತಿಹಾಸವಿದೆ. ಬಾವಿ ಗೋಡೆ ಮೇಲೆ ಉಬ್ಬು ಕಲಾಕೃತಿಗಳು, ಸುರಂಗ ಮಾರ್ಗದ ತೂಬಿನ ವ್ಯವಸ್ಥೆ ಇರುವುದು  ಗಮನಾರ್ಹವಾಗಿದೆ. ಈ ತೆರೆದ ಬಾವಿಯಲ್ಲಿ ಚರಂಡಿ ನೀರು ಹೊರತು ಪಡಿಸಿದರೆ ಅಷ್ಟಾಗಿ ನೀರು ಜಮಾಯಿಸುತ್ತಿರಲಿಲ್ಲ. ಕಳೆದ ನವೆಂಬರ್‌ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಬಾವಿಯ ಅರ್ಧಕ್ಕೆ ನೀರು ಸಂಗ್ರಹವಾಗಿದೆ. ಈ ನೀರನ್ನು ತೆರವುಗೊಳಿಸುವುದು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಪುರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ.

ಇದನ್ನೂ ಓದಿ :‘ರಾಮ್ ತೇರಿ ಗಂಗಾ ಮೈಲಿ’ ನಟ ರಾಜೀವ್ ಕಪೂರ್ ಇನ್ನಿಲ್ಲ

ಸದಾ ನೀರು ನಿಂತು ರಕ್ಷಾ ಗೋಡೆ ಕುಸಿದಿದ್ದು, ನಿರಂತರವಾಗಿ ಕೊಳಚೆ ನೀರು ಹಾಗೆಯೇ ಬಿಟ್ಟರೆ ಬಾವಿಯ ಸುತ್ತಲಿನ ಗೋಡೆ ಕುಸಿಯುವ ಆತಂಕ ವ್ಯಕ್ತವಾಗಿದೆ. ಪುನರುಜ್ಜೀವ ಅಗತ್ಯ: ಅಂದಾಜು 200 ಅಡಿ ಉದ್ದ, ಅಗಲದ ಚೌಕಾಕಾರದ ಬೃಹತ್‌ ಬಾವಿ ಇದಾಗಿದ್ದು, ಈ ಬಾವಿಗೆ ಪಕ್ಕದ ಕೆರೆಯಿಂದ ನೀರು ತುಂಬಿಸುವ ಒಳ ಸುರಂಗ ಮಾರ್ಗದ ವ್ಯವಸ್ಥೆ ಇತ್ತು. ನಂತರದ ವರ್ಷಗಳಲ್ಲಿ ಈ ಎಕೆರೆ ನೀರು ತುಂಬಿಸುವುದು ನಿಲ್ಲಿಸಿದಾಗ ಬಾವಿ ನಿರ್ಲಕ್ಷಕ್ಕೆ ಒಳಗಾಗಿದೆ. ಇತ್ತೀಚಿನ ವರ್ಷಗಳಲ್ಲಿ ತಿಪ್ಪೆ, ಮುಳ್ಳು ಕಂಟಿ ಬೆಳೆದು ಬಾವಿ ಅವಸ್ಥೆಗೀಡಾಗಿತ್ತು. ದಶಕಗಳ ಹಿಂದೆ ಯುವ ಬ್ರಿಗೇಡ್‌ ನೇತೃತ್ವದಲ್ಲಿ ಬಾವಿಯನ್ನು ಸ್ವತ್ಛಗೊಳಿಸಿ, ಇದರಲ್ಲಿ ಶಟಲ್‌ ಕಾಕ್‌ ಆಟಕ್ಕೆ ಬಳಸಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಬಾವಿಯ ಅವಸ್ಥೆಗೆ ಮತ್ತೂಮ್ಮೆ ಪುನರುಜ್ಜೀನವನ ಅಗತ್ಯವಾಗಿದೆ.

ಈ ಭಾಗದಲ್ಲಿ ಸೊಳ್ಳೆಕಾಟ ವಿಪರೀತವಾಗಿದ್ದು, ಗಬ್ಬು ವಾಸನೆ ಅಸಹನೀಯವಾಗಿದೆ. ಕಲ್ಲುಬಾವಿ ನೀರನ್ನು ತೆರವುಗೊಳಿಸಬೇಕಿದ್ದು, ಸದ್ಯಕ್ಕೆ ಅಸಾಧ್ಯದ ಮಾತಾಗಿದೆ. ಚರಂಡಿ ನೀರು ಹರಿಸದಂತೆ ಕ್ರಮ  ಕೈಗೊಳ್ಳುವುದು, ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಿಮಿನಾಶಕ ಸಿಂಪಡಿಸುವುದು ಅಗತ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next