Advertisement

ಕಲ್ಲೊಟ್ಟೆ ಕಾಲನಿ: ಚರಂಡಿಯಲ್ಲಿ ಹೂಳು: ಕ್ರಮಕ್ಕೆ ಸ್ಥಳೀಯರ ಆಗ್ರಹ

09:20 PM Jun 03, 2019 | Sriram |

ಕಾರ್ಕಳ: ಪುರಸಭಾ ವ್ಯಾಪ್ತಿಯ ಕಲ್ಲೊಟ್ಟೆ ನಾಲ್ಕನೇ ವಾರ್ಡ್‌ ನಲ್ಲಿ ಚರಂಡಿ ನಿರ್ಮಾಣವಾಗಿದ್ದರೂ ಹೂಳು ತುಂಬಿದ ಕಾರಣ ತ್ಯಾಜ್ಯ ಶೇಖರಣೆಗೊಂಡಿದೆ.

Advertisement

ಮಳೆಗಾಲ ಆರಂಭವಾಗುತ್ತಿದ್ದಂತೆ ಸೊಳ್ಳೆಗಳಿಂದ ನಾನಾ ಸಾಂಕ್ರಮಿಕ ರೋಗ ಹರಡುವ ಭೀತಿಯಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

ಚಪ್ಪಡಿ ಅಳವಡಿಕೆಯಿಲ್ಲ
ವ್ಯವಸ್ಥಿತವಾಗಿ ಚರಂಡಿ ನಿರ್ಮಾಣ ಗೊಂಡಿದ್ದರೂ ಚಪ್ಪಡಿ ಅಳವಡಿಸಿಲ್ಲ. ತೆರೆದ ಚರಂಡಿಯಿರುವ ಕಾರಣ ತ್ಯಾಜ್ಯದ ದುರ್ವಾಸನೆಯಿಂದ ಪರಿಸರ ಗಬ್ಬು ನಾರುತ್ತಿದೆ.

ಪಡಿತರ ಅಂಗಡಿಯೂ ಇದೆ
ಇದೇ ಪರಿಸರದಲ್ಲಿ ನ್ಯಾಯಬೆಲೆ ಅಂಗಡಿಯೂ ಇದೆ. ಅಲ್ಲಿಗೆ ರೇಷನ್‌ ಪಡೆ ಯಲು ದಿನಂಪ್ರತಿ ನೂರಾರು ಮಂದಿ ಆಗಮಿಸುತ್ತಿದ್ದು, ತೆರೆದ ಚರಂಡಿಯಿಂದ ಅವರಿಗೂ ತೊಂದರೆಯಾಗುತ್ತಿದೆ.

ಆದುದರಿಂದ ಮಳೆಗಾಲ ಆರಂಭ ವಾಗುವುದಕ್ಕಿಂತ ಮುಂಚೆ ಸಂಬಂಧ ಪಟ್ಟವರು ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿಕೊಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next