Advertisement
ರಾಷ್ಟ್ರದ ಮಾನ ಸಮ್ಮಾನದ ಗೌರವದ ಜವಾಬ್ದಾರಿ ಶಿಕ್ಷಕರದ್ದು. ಭಾರತ ಎದುರಿಸುತ್ತಿರುವ ಎಲ್ಲ ಸವಾಲುಗಳಿಗೆ ಶಿಕ್ಷಣದಲ್ಲಿ ಭಾರತೀಯತೆ ಪರಿಹಾರವಾಗಬಲ್ಲದು ಎಂದರು. ಜಿಲ್ಲಾ ಕಾರ್ಯದರ್ಶಿ ಲೋಕಯ್ಯ ಡಿ. ಸ್ವಾಗತಿಸಿ, ಪ್ರಸ್ತಾವನೆಗೈದು ವಿದ್ಯಾಭಾರತಿಯ ಮೂಲ ನಂಬಿಕೆ, ಧ್ಯೇಯ- ಉದ್ದೇಶಗಳ ಈಡೇರಿಕೆಗೆ ಮೂಲಭೂತ ವಿಷಯಗಳ ಬಗ್ಗೆ ವಿವರಣೆ ನೀಡಿದರು. ಭಾರತದ ರಾಷ್ಟ್ರೀಯ ಸುರಕ್ಷತೆಗೆ ಚೀನದ ಸವಾಲುಗಳು ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಪ್ರಚಾರ ಪ್ರಮುಖ್ ಪ್ರದೀಪ ಮೈಸೂರು ವಿಶೇಷ ಉಪನ್ಯಾಸ ನೀಡಿ ಚೀನದಿಂದ ಆಗುವ ಅಪಾಯ ಮತ್ತು ಪರಮ ಶತ್ರುವಾಗಿ ಬೆಳೆಯುತ್ತಿರುವುದಕ್ಕೆ ನಮ್ಮದೇ ಆರ್ಥಿಕ ಪ್ರೋತ್ಸಾಹವೇ ಕಾರಣ ಎಂಬುದನ್ನು ಮನಗಾಣಬೇಕಾಗಿದೆ ಎಂದವರು ತಿಳಿಸಿದರು.
Advertisement
ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜು: ಶೈಕ್ಷಣಿಕ ಸಹಮಿಲನ ಉದ್ಘಾಟನೆ
02:25 AM Jul 17, 2017 | Karthik A |
Advertisement
Udayavani is now on Telegram. Click here to join our channel and stay updated with the latest news.