Advertisement

ಕಳಿಯಾಟ ಹರಿದುಬಂದ ಸಿರಿಮುಡಿ ಹೊರೆಕಾಣಿಕೆ

01:00 AM Feb 06, 2019 | Harsha Rao |

ಕುಂಬಳೆ: ಕಾವುಗೋಳಿ ಎರಿಯಾ ಕೋಟ ಶ್ರೀ ಭಗವತಿ ಕ್ಷೇತ್ರ ನವೀಕರಣ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಕಳಿಯಾಟ ಮಹೋತ್ಸವಕ್ಕೆ ಭಕ್ತರೊಂದಿಗೆ ವಿವಿಧ ತಿರುಮುಲ್‌ ಕಾಯc ಸಮಿತಿ ವತಿಯಿಂದ ಚೆಂಡೆ ವಾದ್ಯಮೇಳದಲ್ಲಿ ಸಿರಿಮುಡಿ ಹೊರೆಕಾಣಿಕೆ ಹುಲ್ಪೆ ಸಮರ್ಪಣೆ ಹರಿದುಬಂತು.

Advertisement

ಫೆ. 5ರಂದು ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ವಿಷ್ಣು ಪ್ರಕಾಶ್‌ ಕಾವುಪಟ್ಟೇರಿ ಕಾವು ಮಠ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.  ಧಾರ್ಮಿಕ   ಸಭೆ, ವೈದಿಕ  ಕಾರ್ಯಕ್ರಮ, ಅನ್ನಪ್ರಸಾದ ವಿತರಣೆ ನಡೆಯಿತು. ಸಾಂಸ್ಕೃತಿಕ     ಕಾರ್ಯಕ್ರಮದ ಅಂಗವಾಗಿ ಎರಿಯಾ ಕೋಟ ಮಹಿಳಾ ಸಂಘದ ನೇತೃತ್ವದಲ್ಲಿ ನೃತ್ಯವೈಭವ ಮನರಂಜಿಸಿತು.

ಇಂದಿನ ಕಾರ್ಯಕ್ರಮ  
ಫೆ. 6ರಂದು ಬೆಳಗ್ಗೆ 7ರಿಂದ ವೈದಿಕ ಕಾರ್ಯಕ್ರಮ, 8ಕ್ಕೆ  ಲಲಿತಾ   ಸಹಸ್ರನಾಮ ಸ್ತೋತ್ರ ಪಾರಾಯಣ, 8.30ರಿಂದ ಭಜನೆ, ಸಂಜೆ 5ಕ್ಕೆ ಧಾರ್ಮಿಕ ಸಭೆ, ಫೆ. 7ರಂದು ಬೆಳಗ್ಗೆ 7ಕ್ಕೆ ಮಹಾಗಣಪತಿ ಹೋಮ, 7.30ಕ್ಕೆ ವೇದಪಾರಾಯಣ, ಬ್ರಹ್ಮಕಲಶ ಪೂಜೆ, ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಪ್ರಸಾದ ವಿತರಣೆ, ಸಂಜೆ 3 ರಿಂದ ಸರೋವರಂ ಕಲ್ಯಾಣ ಮಂಟಪ ಉದ್ಘಾಟನೆ ನಡೆಯಲಿದೆ. ಫೆ.8 ರಿಂದ 12 ರ ವರೆಗೆ ಕಳಿಯಾಟ ಮಹೋತ್ಸವ ನಡೆಯುವುದು.

Advertisement

Udayavani is now on Telegram. Click here to join our channel and stay updated with the latest news.

Next