ಹಿರಿಯರಿಗೆ ಗೌರವ ಕೊಡುವ ವಿಚಾರದಲ್ಲಿ ಕಾಳಿಂಗ ನಾವಡರು ಆದರ್ಶಪ್ರಾಯರು. ಅದಕ್ಕೆ ಸಾಕ್ಷಿ ಎನ್ನುವಂತೆ ನನ್ನ ಅಜ್ಜ , ಹಿರಿಯ ಭಾಗವತ , ಗುರು ದಿವಂಗತ ಗೋರ್ಪಾಡಿ ವಿಟ್ಠಲ ಪಾಟೀಲರು ಹೇಳಿದ ಒಂದು ಕಥೆ.
Advertisement
ಮನೆಯಲ್ಲಿ ಕ್ಯಾಸೆಟ್ ಹಾಡುಗಳನ್ನು ಕೇಳುವ ಕಾಲದಲ್ಲಿ ನಾವಡರ ಹಾಡು ಕೇಳಿದ ಬಳಿಕ ಅಜ್ಜ ನಾವಡರ ಕುರಿತು ಒಂದು ಸ್ವಾರಸ್ಯಕರ ಅವರ ಆದರ್ಶಪ್ರಾಯ ನಡತೆಯ ಬಗ್ಗೆ ಘಟನೆಯೊಂದರ ಮೆಲುಕು ಹಾಕಿದರು.
Related Articles
Advertisement
ಒಟ್ಟಿನಲ್ಲಿ ಶಿಷ್ಯನ ಗೌರವವನ್ನು ಸ್ವೀಕರಿಸಿ ಖುಷಿಯಾಗಿ ಮನೆಗೆ ಬಂದ ಅಜ್ಜ .ಮನೆ ಮಂದಿಗೆ ನಾವಡರು ಸಿಕ್ಕಿ ಗುರು ಕಾಣಿಕೆ ನೀಡಿದ್ದನ್ನು ಹೇಳಿ ಸಂಭ್ರಮಿಸಿದ್ದರಂತೆ.
ನಾವಡರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಗೋರ್ಪಾಡಿಯವರು ವಿಶೇಷವಾಗಿ ಅವರು ಕುಂಜಾಲು ಶೈಲಿಯನ್ನು ಮೈಗೂಡಿಸಿಕೊಂಡಿದ್ದುಕ್ಕಾಗಿ ಇನ್ನಷ್ಟು ಅಭಿಮಾನ ಪಡುತ್ತಿದ್ದರು. ಅಂತಹ ಸ್ವರ ಸಾಮರ್ಥ್ಯದ ಭಾಗವತ ಹಿಂದೂ ಇಲ್ಲ ಮುಂದೆ ಬರುಲೂ ಸಾಧ್ಯವಿಲ್ಲ ಎಂದು ಅದೊಂದು ಬೇರೆಯದ್ದೇ.. ಎಂದು ಅನೇಕ ಕಲಾವಿದರ ಬಳಿ ಅಜ್ಜ ಹೇಳಿಕೊಳ್ಳುತ್ತಿದ್ದರು.
ಶಿಷ್ಯ ಹೇಗೆ ?ಕೋಟ ಕೇಂದ್ರದಲ್ಲಿ ಗುರು ನಾರಾಣಪ್ಪ ಉಪ್ಪೂರರಿಗೆ ಅನಾರೋಗ್ಯ ನಿಮಿತ್ತ 15 ದಿನಗಳ ಕಾಲ ರಜೆಯಲ್ಲಿ ಮನೆಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಆ ವೇಳೆ ಗೋರ್ಪಾಡಿಯವರ ತಾಳ, ಲಯ, ಹಳೆಯ ನಡೆಗಳ ಹೆಚ್ಚುಗಾರಿಕೆ ಬಗ್ಗೆ ತಿಳಿದಿದ್ದ ಉಪ್ಪೂರರೇ ಪತ್ರ ಬರೆದು 15 ದಿನಗಳ ಕಾಲ ವಿದ್ಯಾರ್ಥಿಗಳಿಗೆ ಕಲಿಸಿಕೊಡುವಂತೆ ಕರೆಸಿಕೊಂಡಿದ್ದರಂತೆ. ಉಪ್ಪೂರರ ಕರೆಗೆ ಗೌರವಯುತವಾಗಿ ಸ್ಪಂದಿಸಿದ ಗೋರ್ಪಾಡಿಯವರು 15 ದಿನಗಳ ಕಾಲ ಗುರುವಾಗಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ್ದರು. ಅಲ್ಲಿ ಕಾಳಿಂಗ ನಾವಡರ, ಲಯ, ಅತೀ ಕಲಿಸಿದ್ದನ್ನು ವೇಗವಾಗಿ ಅರ್ಥ ಮಾಡಿಕೊಳ್ಳುವುದನ್ನು ಕಂಡು ಬೆರಗಾಗಿ ಮನೆಗೆ ಬಂದು ನಾವಡರ(ರಾಮಚಂದ್ರ ನಾವಡರು)ಮಾಣಿಯ ಪ್ರತಿಭೆಯ ಕುರಿತಾಗಿ ವರ್ಣಿಸಿದ್ದರಂತೆ. ಕಾಳಿಂಗ ನಾವಡರ ತಂದೆ ಗುಂಡ್ಮಿ ರಾಮಚಂದ್ರ ನಾವಡರು ಗೋರ್ಪಾಡಿಯವರ ಸಮಕಾಲೀನ ಒಡನಾಡಿ ಭಾಗವತರಾಗಿದ್ದರು. ಮಂದಾರ್ತಿ ಮೇಳದಲ್ಲಿ ಇಬ್ಬರೂ ಜೊತೆಯಲ್ಲೇ ಭಾಗವತರಾಗಿ ಸೇವೆ ಸಲ್ಲಿಸಿದ್ದರು.