Advertisement

Kalasa: ವರ್ಗಾವಣೆಗೊಂಡ ಶಿಕ್ಷಕನಿಗೆ ಕಣ್ಣೀರ ವಿದಾಯ ಹೇಳಿದ ಮಕ್ಕಳು

12:39 PM Jul 03, 2023 | Team Udayavani |

ಚಿಕ್ಕಮಗಳೂರು: ಶಾಲೆಯಿಂದ ಚಿತ್ರಕಲಾ ಶಿಕ್ಷಕನಿಗೆ ಮಕ್ಕಳು ಭಾವಪೂರ್ವವಾಗಿ ಬೀಳ್ಕೊಡುಗೆ ಕೊಟ್ಟ ಘಟನೆ ಜಿಲ್ಲೆಯ ಕಳದ ತಾಲೂಕಿನ‌ ಸಂಸೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.

Advertisement

ಚಿತ್ರಕಲಾ ಶಿಕ್ಷಕ ಸಲೀಂ ಜಾವೇದ್ ಅವರು ಕಳೆದ 12 ವರ್ಷಗಳಿಂದ ಸಂಸೆ ಪ್ರೌಢ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಅವರನ್ನು ಸಂಸೆಯಿಂದ ಎನ್.ಆರ್. ಪುರ ತಾಲೂಕಿನ ಮಾಗುಂಡಿ ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಗೊಂಡ ಪ್ರೀತಿಯ ಶಿಕ್ಷಕನಿಗೆ ಮಕ್ಕಳು ಕಣ್ಣೀರ ವಿದಾಯ ಹೇಳಿದ್ದಾರೆ.

ಇದನ್ನೂ ಓದಿ:Bangalore Traffic: ಸಂಚಾರ ದಟ್ಟಣೆ ನಿವಾರಣೆಯತ್ತ ಪೊಲೀಸರ ಚಿತ್ತ

ಸಲೀಂ ಜಾವೇದ್ ಅವರ ಕಾಲು ಮುಟ್ಟಿ ನಮಸ್ಕರಿಸಿದರು. ಶಿಕ್ಷಕರ ವರ್ಗಾವಣೆಗೆ ನೊಂದು ಮಕ್ಕಳು ಕಣ್ಣೀರಿಟ್ಟರೆ, ಮಕ್ಕಳ ಜೊತೆ ಇತರೆ ಶಿಕ್ಷಕರು ಕೂಡಾ ಬೇಸರದಿಂದ ಕಣ್ಣೀರು ಹಾಕಿದರೆ.

Advertisement

Udayavani is now on Telegram. Click here to join our channel and stay updated with the latest news.

Next