Advertisement

Kalasa; ಮಳೆ ಅಬ್ಬರ ಕಡಿಮೆಯಾಗಲೆಂದು ಕಳಸೇಶ್ವರ ಸ್ವಾಮಿಗೆ ಅಗಿಲು ಸೇವೆ

05:15 PM Aug 02, 2024 | Team Udayavani |

ಚಿಕ್ಕಮಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಕಡಿಮೆ ಕಡಿಮೆಯಾಗಲೆಂದು ಮಲೆನಾಡಿಗರು ಶುಕ್ರವಾರ (ಆ.2) ಕಳಸದ ಕಳಸೇಶ್ವರ ಸ್ವಾಮಿಗೆ ಅಗಿಲು ಸೇವೆ ಸಲ್ಲಿಸಿದರು.

Advertisement

ಪುರಾಣ ಪ್ರಸಿದ್ಧ ಕಳಸ ತಾಲೂಕಿನ ಕಳಸೇಶ್ವರ ಸ್ವಾಮಿಗೆ ಕಳಸ ಸುತ್ತಮುತ್ತಲಿನ ಜನರು ಸೇವೆ ಸಲ್ಲಿಸಿ ಮಳೆ ನಿಲ್ಲುವಂತೆ ಪ್ರಾರ್ಥನೆ ನಡೆಸಿದರು.

ಶತಮಾನಗಳಿಂದ ಅತಿವೃಷ್ಠಿ-ಅನಾವೃಷ್ಠಿಯಲ್ಲಿ ಪೂಜೆ ಸಲ್ಲಿಸಿದರೆ ಭಕ್ತರ ಬಯಕೆ ಈಡೇರಿಕೆಯಾಗುತ್ತದೆ ಎಂಬ ಪ್ರತೀತಿಯಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಗೆ ಕಳಸ ತಾಲೂಕಿನ ಜನರು ಕಂಗಾಲಾಗಿದ್ದಾರೆ. ಮಳೆ ನಿಂತು ಜನರ ಜೀವನ ಉಳಿಯುವಂತೆ ಕಳಸೇಶ್ವರನಿಗೆ ಅಗಿಲು ಸೇವೆ ನೀಡಿ ಗ್ರಾಮಸ್ಥರು ಬೇಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next