Advertisement

ಹಾಳಾದ ಗುಲಾಬಿ ಬೆಳೆ: ಪರಿಹಾರಕ್ಕೆ ಮನವಿ

05:27 PM Apr 16, 2020 | Naveen |

ಕಲಬುರಗಿ: ತಾಲೂಕಿನ ಕುಮಸಿ ಗ್ರಾಮದ ರೈತ ವೀರೇಂದ್ರ ಪಾಟೀಲ ಬೆಳೆದ ನಾಲ್ಕು ಎಕರೆ ಗುಲಾಬಿ ಹೂವು ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಮಾರಾಟವಾಗದೇ ಸಂಪೂರ್ಣ ಹಾಳಾಗಿದ್ದು, ಪರಿಹಾರ ಒದಗಿಸಬೇಕು ಎಂದು ಕಲ್ಯಾಣ ಕರ್ನಾಟಕ ತೋಟಗಾರಿಕೆ, ಅರಣ್ಯ, ಕೃಷಿ ಮತ್ತು ಪರಿಸರ ಸಂರಕ್ಷಣ ಸಮಿತಿ ಮನವಿ ಮಾಡಿದೆ.

Advertisement

ಬೇಸಿಗೆಯಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ಗುಲಾಬಿಗೆ ಬೇಡಿಕೆ ಬಹಳಷ್ಟಿರುತ್ತಿತ್ತು. ಈ ವೇಳೆ ಸುಮಾರು 6ರಿಂದ 8 ಲಕ್ಷ ರೂ. ಆದಾಯ ಬರಬಹುದೆಂದು ಭಾವಿಸಲಾಗಿತ್ತು. ಆದರೆ ಬೆಳೆದು ನಿಂತ ಗುಲಾಬಿ ಹೂವು ಶೇ. 75ರಷ್ಟು ಒಣಗಿದೆ. ಇನ್ನೊಂದು ವಾರದಲ್ಲಿ ಸಂಪೂರ್ಣ ಒಣಗುತ್ತದೆ. ಹೀಗಾಗಿ ಬೆಳೆಯಲು ಖರ್ಚು ಮಾಡಿದ ಹಣವೂ ಮರಳಿ ಬರುವುದಿಲ್ಲ ಎಂದು ತಿಳಿಸಿದ್ದಾರೆ.

ಹೂವು ಬೆಳೆದ ರೈತರಿಗೆ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ, ಕೃಷಿ ಸಚಿವರು ಹೇಳಿದ್ದಾರೆ. ಜಿಲ್ಲೆಯಲ್ಲಿ ಸಾವಿರಾರು ರೈತರು ಗುಲಾಬಿ, ಮಲ್ಲಿಗೆ, ಚೆಂಡು ಮುಂತಾದ ಹೂ ಬೆಳೆದಿದ್ದಾರೆ. ಆದರೆ ಮಾರಾಟ ಆಗದಿರುವುದರಿಂದ ಚಿಂತಾಕ್ರಾಂತರಾಗಿದ್ದಾರೆ. ಇಂತಹ ರೈತರಿಗೆ ಸೂಕ್ತ ಪರಿಹಾರ ದರ ನೀಡಬೇಕೆಂದು ಜಿಲ್ಲಾಧಿ ಕಾರಿ ಮತ್ತು ತೋಟಗಾರಿಕೆ ಇಲಾಖೆಗೆ ಸಮಿತಿ ಅಧ್ಯಕ್ಷ ವೀರೇಂದ್ರ ಪಾಟೀಲ ಕುಮಸಿ, ಕೋಶಾಧ್ಯಕ್ಷ ಜಗದೀಶ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಬಿ. ಅಂಬಲಗಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next