Advertisement

ಸಾರಿಗೆ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ

05:17 PM May 23, 2019 | Naveen |

ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಪತ್ತಿನ ಸಹಕಾರ ಸಂಘದ 2019-2024ನೇ ಸಾಲಿನ ಅಧ್ಯಕ್ಷರಾಗಿ ಸಿದ್ದಣ್ಣ ಬಸಣ್ಣ ಸಿಕೇದ್‌ ಕೋಳಕೂರ, ಉಪಾಧ್ಯಕ್ಷರಾಗಿ ಅಜಯಕುಮಾರ ಬಾಬುರಾವ ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

Advertisement

ಕಳೆದ ಮೇ 13ರಂದು ನಡೆದ ಸಂಘದ ನಿರ್ದೇಶಕರ ಚುನಾವಣೆಯಲ್ಲಿ 16 ಜನ ಚುನಾಯಿತರಾಗಿದ್ದರು. ಹೀಗಾಗಿ ಆಯ್ಕೆಯಾದ ನಿರ್ದೇಶಕರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿದ್ಧಣ್ಣ ಸಿಕೇದ್‌ ಹಾಗೂ ಶಿವಪುತ್ರಪ್ಪ ಬೆಳಮಗಿ ಸ್ಪರ್ಧಿಸಿದ್ದರು. ಸಿಕೇದ್‌ ಅವರು 11 ಮತ ಪಡೆದು ಅಧ್ಯಕ್ಷರಾಗಿ ಚುನಾಯಿರಾದರು. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಅಜಯಕುಮಾರ ಬಾಬುರಾವ ಹಾಗೂ ರಾಜಕುಮಾರ ಯಕ್ಕಂಚಿ ಸ್ಪರ್ಧಿಸಿದ್ದರು. ಅಜಯಕುಮಾರ 11 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಚುನಾವಣೆಯಲ್ಲಿ ನಿರ್ದೇಶಕರಾದ ನಾಗೇಶ ಪೂಜಾರಿ, ವೈಜನಾಥ ಪಾಟೀಲ, ಸಿದ್ಧರಾಮ ಕಲಶೆಟ್ಟಿ, ದೇವಿಂದ್ರಪ್ಪ ಗಿರೆಪ್ಪ ಕಪನೂರ ಖಾನಾಪುರ, ರುಕೋದೀನ್‌, ಮಲ್ಲಪ್ಪ ಜವಳಗಿ, ಸುಮಿತ್ರ ಕಾಂಬಳೆ, ಶರಣಮ್ಮ ಚಂದ್ರಕಾಂತ ಪಾಲ್ಗೊಂಡಿದ್ದರು. ನಂತರ ವಿಜಯೋತ್ಸವ ನಡೆಯಿತು.

ನೌಕರರ ಸಂಘದ ಹಿರಿಯ ಪದಾಧಿಕಾರಿಗಳಾದ ಚಂದ್ರಕಾಂತ ಗದ್ದುಗೆ, ಬಸವರಾಜ ಕಣ್ಣಿ, ಭೀಮರಾವ ಯರಗೋಳ, ಎಸ್‌.ಎಸ್‌. ಸಜ್ಜನ, ಇಸ್ಮಾಯಿಲ್ ಪಟೇಲ್, ರಾಮಚಂದ್ರ ಹಯ್ನಾಳಕರ, ಸಂಗಮನಾಥ ರಬಶೆಟ್ಟಿ ಸೇರಿದಂತೆ ಮುಂತಾದವರಿದ್ದರು.

ಸಂಘದ ಪುನಶ್ಚೇತನಕ್ಕೆ ಕ್ರಮ: ನೌಕರರ ಪತ್ತಿನ ಸಹಕಾರ ಸಂಘದ ಆರ್ಥಿಕ ಪುನಶ್ಚೇತನಕ್ಕೆ ದಿಟ್ಟ ಹೆಜ್ಜೆ ಇಡಲಾಗುವುದು ಎಂದು ಅಧ್ಯಕ್ಷರಾದ ಬಳೀಕ ಸಿದ್ಧಣ್ಣ ಸಿಕೇದ್‌ ಕೊಳಕೂರ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next