Advertisement

ಸರ್ವರಿಗೂ ಸಮಾನ ಹಕ್ಕು ಕೊಟ್ಟಿದ್ದು ಕಾಂಗ್ರೆಸ್‌

12:42 PM Apr 05, 2019 | Team Udayavani |

ಕಲಬುರಗಿ: ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್‌. ಡಾ| ಬಿ.ಆರ್‌. ಅಂಬೇಡ್ಕರ್‌ ಅವರಿಂದ ಸಂವಿಧಾನ ರಚಿಸಿ ಸರ್ವರಿಗೂ ಸಮಾನ ಹಕ್ಕು ಕೊಟ್ಟಿದ್ದು ಕಾಂಗ್ರೆಸ್‌. ದೇಶದ ಅಭಿವೃದ್ಧಿಗೆ ಶ್ರಮಿಸಿದ್ದು ಕಾಂಗ್ರೆಸ್‌. ಬಡವರ ಪರವಾಗಿ ಕಾಂಗ್ರೆಸ್‌ ಪಕ್ಷ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡಲಿಲ್ಲ. ರೈತರ ಸಾಲ ಮನ್ನಾ ಮಾಡಿ ಎಂದರೆ ಹಣದ ಪ್ರಿಂಟಿಂಗ್‌ ಮಷಿನ್‌ ಇಲ್ಲ ಎಂದು ಹಾಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ಬೃಹತ್‌ ಜನಸಮೂಹ ಉದ್ದೇಶಿಸಿ ಮಾತನಾಡಿದ ಅವರು, ಬಡವರಿಗೆ ಅನುಕೂಲವಾಗುವ ಯೋಜನೆಗೆ ಹಣ ನೀಡಲಿಲ್ಲ. ಆದರೆ, ಉದ್ಯಮಿಗಳ 3.5 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ದೇಶವನ್ನು ಬರ್ಬಾದ್‌ ಮಾಡಿದೆ. 70 ವರ್ಷ ಕಾಂಗ್ರೆಸ್‌ ದೇಶಕ್ಕಾಗಿ ಏನು ಮಾಡಿದೆ ಎಂದು ಪ್ರಧಾನಿ ಮೋದಿ ಪ್ರಶ್ನಿಸುತ್ತಾರೆ. ಮೋದಿ ಹುಟ್ಟುತ್ತಲೆ ದೇಶದಲ್ಲಿ ಮಂಗಳಯಾನದಂತಹ ಯೋಜನೆಗಳು ಜಾರಿಗೆ ಬಂದವಾ? ಮೋದಿ ನೋಟ್‌ ಬ್ಯಾನ್‌ ಮಾಡಿ ಭ್ರಷ್ಟಾಚಾರ, ಭಯೋತ್ಪಾದನೆ, ನಕಲಿ ನೋಟು ಹಾವಳಿ ನಿಲ್ಲುತ್ತದೆ ಎಂದಿದ್ದರು. ಆದರೆ, ಮೋದಿ ಮಾಡಿದ ಪಾಪದಿಂದ ಮಹಿಳೆಯರು, ಬಡವರು ಬೀದಿಗೆ ಬಿದ್ದರು. ಪ್ರತಿಯೊಬ್ಬರಿಗೆ 15 ಲಕ್ಷ ರೂ, ಹಾಕುತ್ತೇನೆ ಎಂದಿದ್ದರು. ಒಬ್ಬರಿಗೂ ನಯಾ ಪೈಸೆ ಹಾಕಲಿಲ್ಲ. ನಾಳೆ ಬಿಜೆಪಿಯವರು ಮನೆ ಮುಂದೆ ಬಂದರೆ 15 ಲಕ್ಷ ರೂ. ಎಲ್ಲಿ ಎಂದು ಕೇಳಿ ಎಂದು ಜನತೆಗೆ ಕರೆ ಕೊಟ್ಟ ಖರ್ಗೆ, ಮೋದಿ ಸುಳ್ಳಿನ ಸರದಾರ ಎಂದು ವಾಗ್ಧಾಳಿ ನಡೆಸಿದರು.

ಕೂಲಿಗಾರರು, ಟಾಟಾ, ಬಿರ್ಲಾ, ಅಂಬಾನಿ, ಅದಾನಿಯಂತ ದೊಡ್ಡ ಉದ್ಯಮಿ ಯಾರೆ ಇದ್ದರೂ ಅವರಿಗೆಲ್ಲ ಓಟಿನ ಹಕ್ಕಿದೆ. ಎಲ್ಲರ ಓಟಿಗೂ ಒಂದೇ ಬೆಲೆ ಇದೆ. ದೇಶದ ಸಂವಿಧಾನ, ಪ್ರಜಾಪ್ರಭುತ್ವವನ್ನು ಉಳಿಸಿ, ಬೆಳೆಸುವ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next