Advertisement

ಇಬ್ಬರು ಹೆಣ್ಣು ‌ಮಕ್ಕಳಿಗೆ ವಿಷ ಕುಡಿಸಿ, ರೈಲಿಗೆ ತಲೆಕೊಟ್ಟ ತಂದೆ!

09:54 AM Jan 04, 2020 | Team Udayavani |

ಕಲಬುರಗಿ: ಇಬ್ಬರು ಹೆಣ್ಣು ಮಕ್ಕಳಿಗೆ ವಿಷ ಕುಡಿಸಿ ಹತ್ಯೆ ಮಾಡಿದ ತಂದೆಯೋರ್ವ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ನಡೆದಿದೆ.

Advertisement

ಮಿರಿಯಾಣ ಪೊಲೀಸ್ ಠಾಣೆ ವ್ಯಾಪ್ತಿಯ ಭೈರಂಪಳ್ಳಿ ತಾಂಡಾದ ಸಂಜು ಆಲಿಯಾಸ್ ಕುಮ್ಶೆಟ್ಟಿ (35) ಎಂಬಾತ ಗುರುವಾರ ರಾತ್ರಿ ತನ್ನ ಮಕ್ಕಳಾದ ರೋಹಿತಾ (4), ಪರ್ವಿತಾ  (2) ವಿಷ ಕುಡಿಸಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ.‌ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ತೆಲಂಗಾಣದ ತಾಂಡೂರು ಬಳಿ ಆರೋಪಿ ಸಂಜು ರೈಲು ಹಳಿಗೆ ತಲೆ ಕೊಟ್ಟಿದ್ದಾನೆ. ಈ ಮೂಲಕ ತನ್ನ ಮಕ್ಕಳಿಗೆ ವಿಷವುಣಿಸಿ ಕೊಲೆಗೈಯ್ದ ತಂದೆ ಆತ್ಮಹತ್ಯೆಗೆ ಶರಣಾಗಿದ್ದೇನೆ.‌

ಸಂಜು (35) ಡಿಪ್ಲೋಮಾ ಪೂರೈಸಿದ್ದ ಹೈದರಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚಿಗೆ ತಾಂಡಾಕ್ಕೆ ಬಂದಿದ್ದ. ಮದ್ಯವ್ಯಸನಿಯಾಗಿರುವ ಈತ ಮತ್ತು‌ ಪತ್ನಿ ಮಧ್ಯೆ ಹೊಂದಾಣಿಕೆ ಇರಲಿಲ್ಲ.‌ ಇದೇ ಕಾರಣ ಮಕ್ಕಳನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.‌

ಎಸ್ಪಿ ಯಾಡಾ ಮಾರ್ಟಿನ ಮಾರ್ಬನ್ಯಾಂಗ್ ಹಾಗೂ ಪೊಲೀಸರು ತಾಂಡಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next