Advertisement

ರೈಲು ಓಡಾಟ-ವಿಮಾನ ಹಾರಾಟ ಸೇವೆಗೆ ಸಿದ್ಧತೆ

05:12 PM May 23, 2020 | Naveen |

ಕಲಬುರಗಿ: ಲಾಕ್‌ಡೌನ್‌ ಸಡಿಲಿಕೆ ಮಾಡಿದ ಸಾರಿಗೆ ಬಸ್‌ ಸಂಚಾರ ಆರಂಭಿಸಲಾಗಿದ್ದು, ರೈಲು ಓಡಾಟ ಮತ್ತು ವಿಮಾನ ಹಾರಾಟಕ್ಕೆ ಸಿದ್ಧತೆ ನಡೆದಿವೆ. ಮೇ 25ರಿಂದ ದೇಶೀಯ ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಇಲ್ಲಿನ ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಸಮೀಪದ ವಿಮಾನ ನಿಲ್ದಾಣದಿಂದ ಬೆಂಗಳೂರು, ಮೈಸೂರಿಗೆ ಅದೇ ದಿನವೇ ವಿಮಾನ ಸೇವೆ ಪುನಾರಂಭಿಸಲಾಗುತ್ತಿದೆ.

Advertisement

ವಿಮಾನಯಾನ ಸಂಸ್ಥೆಗಳಾದ ಸ್ವಾರ್‌ ಏರ್‌, ಅಲಯನ್ಸ್‌ ಏರ್‌ ವಿಮಾನ ಸಂಚಾರಕ್ಕೆ ಆರಂಭಿಸಲು ನಿರ್ಧರಿಸಿವೆ. ಇದಕ್ಕಾಗಿ ಅವಶ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ವಿಮಾನಯಾನ ಸಂಸ್ಥೆ ಅಧಿಕಾರಿಗಳು ಅವಲೋಕನದಲ್ಲಿ ತೊಡಗಿದ್ದಾರೆ. ಅಲ್ಲದೇ, ಜಿಲ್ಲಾಡಳಿತದೊಂದಿಗೂ ವಿಮಾನ ನಿಲ್ದಾಣದ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಭದ್ರತೆ, ಆರೋಗ್ಯ ತಪಾಸಣೆ ಕುರಿತಂತೆ ಚರ್ಚಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸ್ವಾರ್‌ ಏರ್‌ ವಿಮಾನ ಸಂಸ್ಥೆ ಈಗಾಗಲೇ ಟಿಕೆಟ್‌ ಬುಕ್ಕಿಂಗ್‌ ಆರಂಭಿಸಿದ್ದು, ಮೇ 25ರ ಟಿಕೆಟ್‌ ಬುಕ್‌ ಮಾಡಬಹುದಾಗಿದೆ. ಹೀಗಾಗಿ ವಿಮಾನ ಹಾರಾಟ ಆರಂಭವಾಗುವುದೂ ಬಹುತೇಕ ಖಚಿತವಾಗಿದೆ.

ರೈಲು ಓಡಾಟವೂ ಪಕ್ಕಾ: ಕಲಬುರಗಿ ರೈಲ್ವೆ ನಿಲ್ದಾಣ ಮಾರ್ಗವಾಗಿ ಜೂ.1ರಿಂದ ಮೂರು ರೈಲುಗಳ ಸಂಚಾರಕ್ಕೆ ಚಿಂತನೆ ನಡೆಸಲಾಗಿದ್ದು, ಇದರಿಂದ ರೈಲು ಓಡಾಟವೂ ಪಕ್ಕಾ ಆಗಿದೆ. ಮುಂಬೈನಿಂದ ಕಲಬುರಗಿ ಮೂಲಕ ತೆರಳುವ ಉದ್ಯಾನ್‌ ಎಕ್ಸ್‌ಪ್ರೆಸ್‌, ಹುಸೇನ್‌ ಸಾಗರ್‌, ಕೋನಾರ್ಕ್‌ ಎಕ್ಸ್‌ಪ್ರೆಸ್‌ ರೈಲು ಆರಂಭವಾಗಲಿದೆ. ಅಲ್ಲದೇ, ಶುಕ್ರವಾರದಿಂದಲೇ ರೈಲ್ವೆ ನಿಲ್ದಾಣದಲ್ಲಿ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಶುರುವಾಗಿದೆ ಎಂದು ರೈಲ್ವೆ ನಿಲ್ದಾಣದ ವ್ಯವಸ್ಥಾಪಕ ಎ.ಎಸ್‌. ಪ್ರಸಾದ್‌ರಾವ್‌ ತಿಳಿಸಿದ್ದಾರೆ. ಒಟ್ಟಾರೆ, ಲಾಕ್‌ಡೌನ್‌ನಿಂದ ಒಂದೂವರೆ ತಿಂಗಳಿಂದ ಸ್ತಬ್ಧಗೊಂಡಿದ್ದ ಸಂಚಾರ ಮುಂದಿನ ಒಂದು ವಾರದಲ್ಲಿ ಮರಳಿ ಹಳಿಗೆ ಬರುವ ಎಲ್ಲ ಲಕ್ಷಣ ಕಾಣುತ್ತಿವೆ.

ಎಂಟು ಕಡೆ ಟಿಕೆಟ್‌ ಬುಕ್ಕಿಂಗ್‌
ಜೂ.1ರಿಂದ ರೈಲು ಸಂಚಾರ ಆರಂಭಿಸುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಎಂಟು ಪ್ರಮುಖ ರೈಲ್ವೆ ನಿಲ್ದಾಣದಲ್ಲಿ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಕೌಂಟರ್‌ ಆರಂಭಿಸಲಾಗಿದೆ. ಕಲಬುರಗಿ, ಸೇಡಂ, ಯಾದಗಿರಿ, ನಾಲವಾರ, ಸೈದಾಪುರ, ರಾಯಚೂರು, ಹೊಸಪೇಟೆ, ಬಳ್ಳಾರಿ ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್‌ ಬುಕ್ಕಿಂಗ್‌ ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next