Advertisement

ಅನೈತಿಕ ಸಂಬಂಧಕ್ಕೆ ಅಡ್ಡಿ: ಮಗನನ್ನೇ ಕೊಂದ ತಾಯಿ

03:10 PM Sep 13, 2021 | Team Udayavani |

ಸೇಡಂ: ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಮಗನನ್ನೇ ಪ್ರಿಯಕರನೊಂದಿಗೆ ಸೇರಿ ತಾಯಿಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಮದನಾ ಗ್ರಾಮದಲ್ಲಿ ನಡೆದಿದೆ.

Advertisement

ಸೆಂಟರಿಂಗ್‌ ಕೆಲಸ ಮಾಡಿಕೊಂಡಿದ್ದ ನಾಗೇಶ ರಾಮು ಮದ್ದೂರ (25) ಕೊಲೆಯಾದವ. ತಾಯಿ, ಪ್ರಿಯಕರ ಹಾಗೂ ತಂಗಿ ಮೂವರು ಸೇರಿ ನಾಗೇಶನನ್ನು ನೇಣು ಬಿಗಿದು ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸಲು ಮುಂದಾಗಿದ್ದರು.

ಐದಾರು ವರ್ಷಗಳಿಂದ ಮುನಕನಪಲ್ಲಿಯ ಭರತಕುಮಾರ ಶರಣಯ್ಯಸ್ವಾಮಿ ಎನ್ನುವನ ಜೊತೆ ಮದನಾ ಗ್ರಾಮದ ಯಲ್ಲಮ್ಮ ರಾಮು ಮದ್ದೂರ ಅಕ್ರಮ ಸಂಬಂಧ ಹೊಂದಿದ್ದಳು. ವಿಷಯ ಯಲ್ಲಮ್ಮನ ಮಗ ನಾಗೇಶನಿಗೆ ತಿಳಿದು ಆಕ್ಷೇಪ ವ್ಯಕ್ತಪಡಿಸಿದಾಗ, ಆತನ ತಂಗಿ ಅನಿತಾ ರಾಮು ಮದ್ದೂರ ಜೊತೆಗೂಡಿ ಮೂರು ಜನ ಸೇರಿ ಹಗ್ಗದಿಂದ ಕುತ್ತಿಗೆ ಬಿಗಿದು ನಾಗೇಶನನ್ನು ಕೊಲೆ ಮಾಡಿದ್ದಾರೆ. ನಂತರ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಬಿಗಿದಿದ್ದಾರೆ.

ಘಟನೆ ಸಂಬಂಧ ತನಿಖೆ ಕೈಗೊಂಡ ಮುಧೋಳ ಪಿಐ ಆನಂದರಾವ್‌ ತಲೆಮರೆಸಿಕೊಂಡಿದ್ದ ಮೂವರು ಕೊಲೆಗಡುಕರನ್ನು ಪತ್ತೆ ಹಚ್ಚಿ ಜೈಲಿಗಟ್ಟಿದ್ದಾರೆ. ಪ್ರಕರಣ ಮುಧೋಳ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next