Advertisement

ಶರಣರ ನಾಡಲ್ಲಿ ಕೃಷ್ಣ ಆರಾಧಕ

01:52 PM Dec 30, 2019 | Naveen |

ಕಲಬುರಗಿ: 1972ರ ಭೀಕರ ಬರಗಾಲ ಸಂದರ್ಭದಲ್ಲಿ 10 ದಿನಗಳ ಕಾಲ ಜಿಲ್ಲೆಯಲ್ಲಿಯೇ ವಾಸ್ತವ್ಯ ಹೂಡಿದ್ದ ಪೇಜಾವರ ಶ್ರೀಗಳು ಜನ-ಜಾನುವಾರು ಅಗತ್ಯ ಸಹಾಯ ಕಲ್ಪಿಸಿದ್ದರು.

Advertisement

ಪ್ರತಿದಿನ ನಾಲ್ಕೈದು ಹಳ್ಳಿಗಳಿಗೆ ಸಂಚರಿಸಿ ಜನರಿಗೆ ಧೈರ್ಯ ತುಂಬುವುದರೊಂದಿಗೆ ಜನರಿಗೆ ಅಗತ್ಯವಾದ ಬಟ್ಟೆಬರೆ-ಧವಸಧಾನ್ಯ ನೀಡಿದ್ದರು ಎಂಬುದನ್ನು ಜಿಲ್ಲೆಯ ಹಿರಿಯ ಜೀವಿಗಳು ಈಗಲೂ ಸ್ಮರಿಸುತ್ತಾರೆ. ನಗರದ ಮೋಹನ್‌ ಲಾಡ್ಜ್ ಹಿಂದುಗಡೆ ಇದ್ದ ಪಾದೂರು ರಾಮಕೃಷ್ಣ ತಂತ್ರಿ ಅವರ ಮನೆಯಲ್ಲಿ ತಂಗಿದ್ದ ಶ್ರೀಗಳು ಪ್ರತಿನಿತ್ಯ ಬೆಳಗ್ಗೆ ಪೂಜಾ ಕಾರ್ಯ ಮುಗಿಸಿ ಹಳ್ಳಿ-ಹಳ್ಳಿಗೆ ಹೋಗುತ್ತಿದ್ದರು. ಸಂಜೆ ಕಲಬುರಗಿ ನಗರಕ್ಕೆ ಬಂದು ಸಭೆಗಳನ್ನು ನಡೆಸುತ್ತಿದ್ದರು. ಇವರ ಜತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ, ಪಾದೂರು ರಾಮಕೃಷ್ಣ ತಂತ್ರಿ ಹಾಗೂ ಇತರರು ಜತೆಗೆ ತೆರಳುತ್ತಿದ್ದರು.

2005ರಲ್ಲಿ ಕಲಬುರಗಿ ನಗರದಲ್ಲಿ ಪೇಜಾವರ ಶ್ರೀಗಳು ಚಾತುರ್ಮಾಸ ಕೈಗೊಂಡಾಗ 50 ದಿನಗಳ ನಗರದಲ್ಲಿಯೇ ತಂಗಿದ್ದರು. ಈ ಸಂದರ್ಭದಲ್ಲಿ ಶ್ರೀಗಳು ಎಲ್ಲರನ್ನುದ್ದೇಶಿಸಿ ನೀಡಿದ ಸಂದೇಶ ಹಲವರ ಮನದಲ್ಲಿ ಈಗಲೂ ಬೇರೂರಿದೆ.

ಜಯತೀರ್ಥ ವಿದ್ಯಾರ್ಥಿ ನಿಲಯ ಸ್ಥಾಪನೆ: ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅನುಕೂಲ ಆಗಲೆಂದು ಇಲ್ಲಿನ ವಿದ್ಯಾನಗರದಲ್ಲಿ ಅಖೀಲ ಭಾರತ ಮಾಧ್ವ ಮಹಾಮಂಡಳ ವತಿಯಿಂದ ಜಯತೀರ್ಥ ವಿದ್ಯಾರ್ಥಿ ನಿಲಯ ಆರಂಭಿಸಿದ್ದರು.

ಉತ್ತಮ ನಂಟು: ಕಲಬುರಗಿ ನಗರದಲ್ಲಿ ರಾಮಮಂದಿರ ಉದ್ಘಾಟನೆ, ಹಿಂದೂ ಸಮಾವೇಶ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಪೇಜಾವರ ಶ್ರೀಗಳು ಪಾಲ್ಗೊಳ್ಳುವುದರೊಂದಿಗೆ ಕಲಬುರಗಿಯೊಂದಿಗೆ ಉತ್ತಮ ನಂಟು ಹೊಂದಿದ್ದರು.

Advertisement

ಪೇಜಾವರ ಸೈನ್ಯ ಸ್ಥಾಪನೆ: ಕಲಬುರಗಿ ನಗರದೊಂದಿಗೆ ಪೂಜ್ಯರಿಗಿರುವ ಗುರು-ಶಿಷ್ಯ ಸಂಬಂಧ ಚಿರಸ್ಥಾಯಿಯಾಗಿ ಉಳಿಸುವ ನಿಟ್ಟಿನಲ್ಲಿ ಕಲಬುರಗಿ ನಗರದಲ್ಲಿ ಪೇಜಾವರ ಶ್ರೀಗಳ ಹೆಸರಿನಲ್ಲಿ ಪೇಜಾವರ ಸೈನ್ಯ ಸ್ಥಾಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next