Advertisement

ಸೋಮನಾಥ ಕೆರೆ ಭರ್ತಿ

03:35 PM Nov 30, 2019 | Naveen |

ಬಾಲಪ್ಪ ಎಂ. ಕುಪ್ಪಿ
ಕಕ್ಕೇರಾ:
ಸುಮಾರು ವರ್ಷಗಳಿಂದ ಅಭಿವೃದ್ಧಿಯಾಗದೆ ಹಾಗೇ ಉಳಿದಿದ್ದ ಸೋಮನಾಥ ಕೆರೆ ಈಗ ಹುಳು ಮುಕ್ತವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮೇನಲ್ಲಿ 12 ಲಕ್ಷ ರೂ. ಅನುದಾನದಲ್ಲಿ ಸೋಮನಾಥ ಕೆರೆ ಹೂಳು ಎತ್ತುವ ಕಾಮಗಾರಿ ಕೈಗೊಳ್ಳಲಾಗಿತ್ತು. ಒಂದೂವರೆ ತಿಂಗಳಲ್ಲಿಯೇ ಸಂಪೂರ್ಣ ಹೂಳೆತ್ತಿ ಈಗ ಸಂಪೂರ್ಣ ಅಭಿವೃದ್ಧಿ ಮಾಡಲಾಗಿದೆ. ಇದರಿಂದಾಗಿ ಈ ಭಾಗದ ಜೀವ ಸಂಕುಲಕ್ಕೆ ಆಸರೆಯಾಗಿದೆ.

Advertisement

ಹೊಳೆತ್ತದೆ ಇದ್ದಿದ್ದರಿಂದ ಪ್ರತಿ ವರ್ಷ ಬೇಸಿಗೆ ವೇಳೆ ಸೋಮನಾಥ ಕೆರೆ ನೀರಿಲ್ಲದೆ ಬಣಗುಡುತಿತ್ತು. ಹೀಗಾಗಿ ಜಾನುವಾರುಗಳು ನೀರಿಗಾಗಿ ಪರಿತಪಿಸಬೇಕಾಗಿತ್ತು. ಅನೇಕ ವರ್ಷಗಳಿಂದಲೂ ನೀರಿನ ಸಮಸ್ಯೆ ಎದುರಾಗಿತ್ತು. ಆದರೆ ಈಗ ಕೆರೆ ಪುನಶ್ಚೇತನಗೊಂಡು ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ.

ಸೋಮನಾಥ ದೇವರ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ನೀರು ಕುಡಿಯಲು ಉಪಯುಕ್ತವಾಗಿದೆ. ಇದು ಅಲ್ಲದೇ ದೇವರ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಗಳಿಗಾಗಿ ಕೆರೆ ನೀರು ಬಳಸಲಾಗುತ್ತದೆ ಎಂದು ಸೋಮನಾಥ ದೇವಾಲಯದ ಪೂಜ್ಯರು ಹೇಳುತ್ತಾರೆ.

15 ಎಕರೆ ಪ್ರದೇಶ ವಿಸ್ತೀರ್ಣ: ಕೆರೆ ಒಟ್ಟು 15 ಎಕರೆ ವಿಸ್ತೀರ್ಣ ಹೊಂದಿದೆ. 15 ಅಡಿ ಹೂಳೆತ್ತಿದ್ದು, 24 ಸಾವಿರ ಟ್ರ್ಯಾಕ್ಟರ್‌ ಮಣ್ಣನ್ನು ರೈತರು ತಮ್ಮ ಜಮೀನುಗಳಿಗೆ ಉಚಿತವಾಗಿ ಬಳಸಿಕೊಂಡಿದ್ದಾರೆ. ಈ ಹಿಂದೇ 200 ಎಕರೆ ಪ್ರದೇಶಕ್ಕೆ ಕೆರೆ ನೀರನ್ನು ಪಂಪ್‌ಸೆಟ್‌ ಮೂಲಕ ಪಡೆಯುತ್ತಿದ್ದರು. ಈಗ ದೇವರ ಕೆರೆ ಇರುವುದರಿಂದ ಪಂಪ್‌ಸೆಟ್‌ ಬಳಸಬಾರದು ಎಂದು ಕೆರೆ ಅಭಿವೃದ್ಧಿ ಸಮಿತಿ ಸೂಚಿಸಿದ್ದರಿಂದ ಉಪಯುಕ್ತ ಕಡಿಮೆ ಎನ್ನಲಾಗಿದೆ.

40 ಲಕ್ಷ ಮಂಜೂರು: ಸೋಮನಾಥ ಕೆರೆ ಅಭಿವೃದ್ಧಿಗೊಳಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ನರಸಿಂಹನಾಯಕ(ರಾಜೂಗೌಡ) ಅವರು ಕೆರೆ ತಡೆಗೋಡೆ ಹಾಗೂ ವಿವಿಧ ಸೌಕರ್ಯ ಒದಗಿಸಲು ಇನ್ನೂ 40 ಲಕ್ಷ ರೂ. ಮಂಜೂರು ಮಾಡಿಸಿ ಅಭಿವೃದ್ಧಿಗೆ ಮುತುವರ್ಜಿ ವಹಿಸಿದ್ದಾರೆ.

Advertisement

ಕೆರೆ ಐತಿಹಾಸ: ಸೋಮನಾಥ ಕೆರೆಗೆ ಐತಿಹಾಸಿಕ ಹಿನ್ನೆಲೆ ಇದೆ. ಈ ಹಿಂದೆ ಕುಡಿಯವ ನೀರಿನ ಸಮಸ್ಯೆ ಉಂಟಾಗದಂತೆ ಅಂದಿನ ಸುರಪುರ ಸಂಸ್ಥಾನದ ಗಡ್ಡಿಪಿಡ್ಡನಾಯಕನ ಆಡಳಿತಾವಧಿಯಲ್ಲಿ ಕೆರೆ ನಿರ್ಮಿಸಲಾಗಿದೆ. ಹೀಗಾಗಿ ಸೋಮನಾಥ ಕೆರೆ ಎಂದು ಪ್ರಸಿದ್ಧಿ ಪಡೆದಿದೆ ಎಂದು ಹಿರಿಯರು ಸ್ಮರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next