Advertisement

ಕಾಜೂರು ಮಖಾಂ ಉರೂಸ್‌ ಸಂಪನ್ನ

10:21 PM Feb 28, 2021 | Team Udayavani |

ಬೆಳ್ತಂಗಡಿ: ಕಾಜೂರು ಮಖಾಂ ಶರೀಫ್ ಉರೂಸ್‌ ಸಮಾರೋಪ, ಸರ್ವಧರ್ಮೀಯರ ಸೌಹಾರ್ದ ಸಂಗಮ ರವಿವಾರ ನಡೆಯಿತು.

Advertisement

ಧಾರ್ಮಿಕ ವಿದ್ವಾಂಸ ಹಾಗೂ ಕಾಜೂರು ಕ್ಷೇತ್ರದ ಗೌರವಾಧ್ಯಕ್ಷ ಆಗಿರುವ ಸಯ್ಯಿದ್‌ ಕುಂಬೋಳ್‌ ತಂšಳ್‌ ಅಧ್ಯಕ್ಷತೆ ವಹಿಸಿದ್ದರು. ಸಂಜೆ ಸೌಹಾರ್ದ ಸಭೆ ನಡೆದು ವಿಧಾನ ಪರಿಷತ್‌ ಸದಸ್ಯ ಹಾಜಿ ಬಿ.ಎಂ. ಫಾರೂಕ್‌ ಉದ್ಘಾಟಿಸಿದರು.

ಕಾಜೂರು ತಂšಳ್‌ ಆಶಯ ಭಾಷಣ ಮಾಡಿದರು. ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಮೌಲಾನಾ ಶಾಫಿ ಸಅದಿ ಬೆಂಗಳೂರು ಪ್ರಧಾನ ಅತಿಥಿಯಾಗಿದ್ದರು.

ಚೊಕ್ಕಬೆಟ್ಟು ಮಸ್ಜಿದ್‌ ಖತೀಬ್‌ ಅಝೀಝ್ ದಾರಿಮಿ ಮತ್ತು ಬೆಳ್ತಂಗಡಿ ಕ್ರೈಸ್ತ ಧರ್ಮಪ್ರಾಂತ್ಯದ ವಿಕಾರ್‌ ಜನರಲ್‌ ಫಾ| ಜೋಸೆಫ್ ವಲಿಯಪರಂಬಿಲ್‌ ಧರ್ಮ ಸಂದೇಶ ನೀಡಿದರು. ವಿಧಾನ ಪರಿಷತ್ತಿನ ಸದಸ್ಯ ಕೆ. ಹರೀಶ್‌ ಕುಮಾರ್‌, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ವಸಂತ ಬಂಗೇರ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಸರ್ವ ಧರ್ಮ ಖ್ಯಾತಿಯ ಉರೂಸ್‌ ಸಂಭ್ರಮಕ್ಕೆ ಎಲ್ಲೆಡೆಯಿಂದ ಧರ್ಮಾತೀತವಾಗಿ ಜನ ಭೇಟಿ ನೀಡಿದರು. ದರ್ಗಾದಲ್ಲಿ ತಮ್ಮ ಇಷ್ಟಾರ್ಥ ನೆರವೇರಲು ಪ್ರಾರ್ಥನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next