Advertisement

ಕೈಕಂಬ ಬಸ್‌ ತಂಗುದಾಣದಲ್ಲಿ ಕಸದ ರಾಶಿ

07:05 AM Apr 15, 2018 | |

ಕಾಸರಗೋಡು: ಇದು ರಾಷ್ಟ್ರೀಯ ಹೆದ್ದಾರಿ 66ರ ಕೈಕಂಬದ ಬಸ್‌ ತಂಗುದಾಣದ ದುರವಸ್ಥೆ. ಕೈಕಂಬಕ್ಕೆ ಬಾಯಾರು, ಕುರುಡಪದವು, ಬಳ್ಳೂರು ಕಡೆಯಿಂದ ಮಂಗಳೂರಿಗೆ ದಿನನಿತ್ಯ ನೂರಾರು ಪ್ರಯಾಣಿಕರು ಇದೇ ಬಸ್‌ ನಿಲ್ದಾಣದಿಂದಲೇ ಮಂಗಳೂರಿನ ಬಸ್ಸಿಗೆ ಕಾಯಬೇಕಿದೆ. ಇಲ್ಲಿ ಅಕ್ಷರಶ: ಕಸದ ತೊಟ್ಟಿಯ ಮಧ್ಯೆ ಕುಳಿತಂತೆ ನಿಮಗೆ ಅನಿಸದೆ ಇರದು.

Advertisement

ಅಕಸ್ಮತ್ತಾಗಿ ನಿಮ್ಮಲ್ಲಿದ್ದ ಕಸವನ್ನು ಹಾಕಬೇಕೆಂದು ಕಸದ ತೊಟ್ಟಿಯನ್ನು ನೀವೇನಾದರು ಹುಡುಕಿದರೆ  ದುರ್ಬೀನು ಬಳಸಿ
ದರೂ ಕಸದ ತೊಟ್ಟಿ ಇಲ್ಲಿ ಕಾಣಸಿಗದು. ಮಳೆಗಾಲದಲ್ಲಿ ಈ ಕಸಗಳ ಜೊತೆ ಮರದ ಎಲೆಗಳು ಸೇರಿ ಕೊಳೆತು ಬಸ್‌ ತಂಗು
ದಾಣವನ್ನು ದುರ್ಗಂಧಮಯವಾಗಿಸುತ್ತದೆ. ಈ ಮೊದಲೇ ಹೇಳಿದಂತೆ ಸಾಕಷ್ಟು ಮಹಿಳೆಯರು, ಮಕ್ಕಳು ಬರುವ ಈ ತಂಗುದಾಣದ ಸ್ವತ್ಛತೆಯ ಜೊತೆ ಒಂದು ಸಾರ್ವಜನಿಕ ಶೌಚಾಲಯ ನಿರ್ಮಾಣ ಕೂಡ ಆಗಬೇಕೆಂದು ಸಾರ್ವಜನಿಕರು ವ್ಯಾಪಕವಾಗಿ ಆಗ್ರಹಿಸುತ್ತಿದ್ದಾರೆ.

ದೇಶದ ಪ್ರಧಾನಿ ಸ್ವಚ್ಛ ಭಾರತ ನಿರ್ಮಾಣದ ಕರೆ ಕೊಟ್ಟಾಗ ಅದನ್ನು ಸ್ಥಳೀಯ ಆಡಳಿತ ನಿರ್ಲಕ್ಷಿಸುವುದು ಸರಿಯಲ್ಲ. ಆದ್ದರಿಂದ ಕೂಡಲೇ ಸ್ಥಳೀಯ ಆಡಳಿತ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next