Advertisement

ಕಫ್‌ಪರೇಡ್‌ ಶ್ರೀ ಸಾಯಿನಾಥ ಮಿತ್ರ ಮಂಡಳಿ: ಮಹಾಪೂಜೆ

03:31 PM Feb 02, 2019 | Team Udayavani |

ಮುಂಬಯಿ: ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನ ಬಾಕೂìರು ಇದರ ಆಡಳಿತ ಮೊಕ್ತೇಸರ, ಮನಿಫೋಲ್ಡ್‌ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ಲಿಮಿಟೆಡ್‌ ಮುಂಬಯಿ ಇದರ ಆಡಳಿತ ನಿರ್ದೇಶಕ ಕಡಂದಲೆ ಸುರೇಶ್‌ ಎಸ್‌. ಭಂಡಾರಿ ಧುರೀಣತ್ವದಲ್ಲಿ ದಕ್ಷಿಣ ಮುಂಬಯಿ  ಕೊಲಾಬಾ ಕಫ್‌ಪರೇಡ್‌ನ‌ಲ್ಲಿ ಕಳೆದ ಮೂರು ದಶಕಗಳಿಂದ ಸೇವಾ ನಿರತ ಶ್ರೀ ಸಾಯಿನಾಥ ಮಿತ್ರ ಮಂಡಳಿಯ 30 ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಮತ್ತು ಶ್ರೀ ಸಾಯಿಬಾಬಾ ಪೂಜೆ ಹಾಗೂ ಸಾಯಿ  ಭಂಡಾರವು ಜ. 31 ರಂದು  ಕಪ್‌ಪರೇಡ್‌ನ‌ ಸಾಯಿ ಸದನ್‌ನಲ್ಲಿ ವಿವಿಧ ಧಾರ್ಮಿಕ, ವೈವಿಧ್ಯಮಯ ಸಾಂಸ್ಕೃತಿಕ  ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

Advertisement

ಕೊಲಾಬಾ ನಗರದ ವಾರ್ಷಿಕ ಜಾತ್ರೆ ಎಂದೇ ಪ್ರಸಿದ್ಧಿಯ ಈ  ಕಾರ್ಯಕ್ರಮದಲ್ಲಿ ಶ್ರೀ  ಸಾಯಿ ಅಭಿಷೇಕ, ಹೋಮ,  ಶ್ರೀ ಸತ್ಯನಾರಾಯಣ ಮಹಾಪೂಜೆ, ಸಾಯಿ ಮಹಾರತಿ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಹಾಗೂ ಸಂಜೆ ಶ್ರೀ ಸಾುಬಾಬಾ ಅವರ ಭಂಡಾರ ಜರಗಿತು. ವಿದ್ವಾನ್‌ ಶ್ರೀ ಲಕ್ಷಿ¾àನಾರಾಯಣ ಭಟ್‌ ಭಾಂಡೂಪ್‌ ತಮ್ಮ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ವಿಧಿವತ್ತಾಗಿ ನೆರವೇರಿಸಿ ನೆರೆದ ಸದ್ಭಕ್ತರಿಗೆ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು.

ಮಂಗಳವಾರ ಸಾಂಸ್ಕೃತಿಕ  ಕಾರ್ಯಕ್ರಮ, ಅರಸಿನ ಕುಂಕುಮ, ಇನ್ನಿತರ  ಧಾರ್ಮಿಕ ಕಾರ್ಯಕ್ರಮ ಹಾಗೂ ಬುಧ‌ವಾರ ಶ್ರೀ ಸಾಯಿ ಭಜನೆಯೊಂದಿಗೆ ವಾರ್ಷಿಕ ಸಂಭ್ರಮವು ಪ್ರಾರಂಭಗೊಂಡಿತು. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸರಕಾರದ ಸಂಪುಟ ಸಚಿವ, ಸ್ಥಾನೀಯ ಶಾಸಕ ರಾಜ್‌ ಕೆ. ಪುರೋಹಿತ್‌, ಮಹಾರಾಷ್ಟ್ರ ವಿಧಾನ ಪರಿಷತ್‌ ಸದಸ್ಯ ರಾಹುಲ್‌ ಸುರೇಶ್‌ ನಾರ್ವೆಕರ್‌, ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಆರ್‌. ಎಂ. ಭಂಡಾರಿ, ಡಾ| ಶಿವರಾಮ ಕೆ. ಭಂಡಾರಿ ಶಿವಾಸ್‌, ಸತೀಶ್‌ ಭಂಡಾರಿ, ವಿಠಲ ಭಂಡಾರಿ, ಶಾರದಾ ವಿ. ಭಂಡಾರಿ, ನರಸಮ್ಮ ಭಂಡಾರಿ, ಪ್ರೇಮಾ ಭೋಜರಾಜ್‌, ರಾಮಚಂದ್ರ ಕೋಟ್ಯಾನ್‌, ಸದಾನಂದ ಪೂಜಾರಿ ತೆಳ್ಳಾರ್‌ ಸೇರಿದಂತೆ ಅನೇಕ  ಗಣ್ಯರು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಶ್ರೀ ಸಾಯಿನಾಥ ಮಿತ್ರ ಮಂಡಳಿ ಅಧ್ಯಕ್ಷ ಕಡಂದಲೆ ಸುರೇಶ್‌ ಎಸ್‌. ಭಂಡಾರಿ, ಶೋಭಾ ಸುರೇಶ್‌ ಭಂಡಾರಿ ಮತ್ತು ಸೌರಭ್‌ ಸುರೇಶ್‌ ಭಂಡಾರಿ ಸರ್ವ ಸಾಯಿಭಕ್ತರನ್ನು ಸತ್ಕರಿಸಿದರು. ಈ ಬಾರಿ ಬೃಹದಾಕಾರದ ಶ್ರೀ ರಾಮ ದೇವರ ಪ್ರತಿಕೃತಿ ಮಹಾದ್ವಾರವು ಸದ್ಭಕ್ತರನ್ನು ಆರ್ಕರ್ಷಿಸಿತು. 

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next