Advertisement

ನಾಯಕತ್ವದಲ್ಲಿ ಕಾಡುತ್ತೆ ಏಕಾಂಗಿತನ: ನಾರಾಯಣಮೂರ್ತಿ

10:13 PM Apr 02, 2023 | Team Udayavani |

ಅಹ್ಮದಾಬಾದ್‌:ನಾಯಕತ್ವದ ಹೊಣೆಯನ್ನು ವಹಿಸಿಕೊಂಡು ಉನ್ನತ ಸ್ಥಾನ ತಲುಪಿದ ಮೇಲೆ ಒಂದು ಹಂತದಲ್ಲಿ ಏಕಾಂಗಿತನ ಕಾಡುತ್ತಿದೆ. ಆ ಹಂತವನ್ನೂ ಅನುಭವಿಸಿದ್ದೇನೆ ಎಂದು ಇನ್ಫೋಸಿಸ್‌ನ ಸಹ-ಸಂಸ್ಥಾಪಕ ಡಾ.ಎನ್‌.ಆರ್‌.ನಾರಾಯಣಮೂರ್ತಿ ಹೇಳಿದ್ದಾರೆ.

Advertisement

ಕೈಗಾರಿಕೋದ್ಯಮಿ ಅಂಜನಾ ದತ್ತಾ ಅವರು ಬರೆದ “ಐ ಡಿಡ್‌ ವಾಟ್‌ ಐ ಹಾಡ್‌ ಟು ಡು’ (I Did What I Had to Do) ಎಂಬ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾಯಕತ್ವ ಎಂದರೆ ಉನ್ನತ ಸ್ಥಾನದಲ್ಲಿ ಕುಳಿತು ಸರಿಯಾದ ಕೆಲಸಗಳನ್ನು ಮಾಡಿ, ಉಳಿದವರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು. ಅವರು ಆತನಿಂದ ಸೂಕ್ತ ಮಾರ್ಗದರ್ಶನಕ್ಕಾಗಿ ಕಾಯುತ್ತಿರುತ್ತಾರೆ ಎಂದರು.

ಒಂದು ಹಂತದಲ್ಲಿ ನಾಯಕತ್ವದಿಂದಾಗಿ ಏಕಾಂಗಿತನ ಕಾಡುತ್ತದೆ. ಅದನ್ನು ಒಂದು ಹಂತದಲ್ಲಿ ಅನುಭವಿಸಿದ್ದೆ ಎಂದೂ ಹೇಳಲು ಮರೆಯಲಿಲ್ಲ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next