Advertisement

ಕಡೂರು: 15 ದಿನ ಸಲೂನ್‌ ಬಂದ್‌

01:14 PM Jul 04, 2020 | Naveen |

ಕಡೂರು: ಕಡೂರು ತಾಲೂಕಿನ ಎಲ್ಲಾ ವೃತ್ತಿನಿರತ ಕ್ಷೌರಿಕರು ಮುಂದಿನ 15 ದಿನಗಳ ಕಾಲ ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಲು ನಿರ್ಧರಿಸಿರುವುದಾಗಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಕೆ.ಸಿ.ಪರಮೇಶ್‌ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋವಿಡ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ. ಇದನ್ನು ಅರಿತ ಕರ್ನಾಟಕ ರಾಜ್ಯ ಸವಿತಾ ಸಮಾಜದ ಕಾರ್ಯಾಧ್ಯಕ್ಷರ ಸೂಚನೆ ಮೇರೆಗೆ ಮುಂದಿನ 15 ದಿನಗಳ ಕಾಲ ತಾಲೂಕಿನಲ್ಲಿರುವ ಎಲ್ಲಾ ಕ್ಷೌರದಂಗಡಿಗಳನ್ನು ಶನಿವಾರದಿಂದ ಮುಚ್ಚಲು ತೀರ್ಮಾನಿಸಲಾಯಿತು ಎಂದು ರಾಜ್ಯ ಸಂಘದ ರವಿಕುಮಾರ್‌ ಮಾಹಿತಿ ನೀಡಿದರು.

ಶನಿವಾರ ಕಡೂರು-ಬೀರೂರು ಪಟ್ಟಣಗಳಲ್ಲಿ ಸಲೂನ್‌ ಬಂದ್‌ ಆಗಲಿದ್ದು, ಸೋಮವಾರದಿಂದ ತಾಲೂಕಿನಾದ್ಯಂತ ನಮ್ಮ ಭಾಂಧವರಲ್ಲಿಗೆ ತೆರಳಿ ಅಲ್ಲಿಯ ಅಂಗಡಿಗಳನ್ನು ಸಹ ಮುಚ್ಚಿಸುವುದಾಗಿ ತಿಳಿಸಿದರು. ಈ ವೇಳೆ ಎಸ್‌. ಬಾಲು, ಕೆ.ಸಿ.ವೆಂಕಟೇಶ್‌, ಎಂ.ಎಚ್‌. ಪ್ರಕಾಶ್‌, ಎನ್‌.ವೆಂಕಟೇಶ್‌, ಸುರೇಶ್‌, ಕೆ.ಸಿ.ಮಂಜುನಾಥ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next