Advertisement

ಗಣೇಶೋತ್ಸವಕ್ಕೆ ಕ್ಷಣಗಣನೆ ಆರಂಭ

11:43 AM Sep 01, 2019 | Naveen |

•ಎ.ಜೆ.ಪ್ರಕಾಶಮೂರ್ತಿ
ಕಡೂರು
: ವಿಘ್ನ ನಿವಾರಕ ಶ್ರೀ ಗಣೇಶೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗಣಪತಿ ತಯಾರಕರು ತಮ್ಮ ಕೈಚಳಕದಿಂದ ತಯಾರಿಸಿದ ಆಕರ್ಷಕ ಗಣಪನ ಮೂರ್ತಿಗಳ ಮಾರಾಟಕ್ಕೆ ಸಿದ್ಧವಾಗಿದ್ದಾರೆ.

Advertisement

ಪ್ರತಿ ಬಾರಿ ಗಣೇಶೋತ್ಸವಕ್ಕೂ ಮೊದಲೇದೊಡ್ಡ ಪಟ್ಟಣಗೆರೆ ಕುಂಬಾರ ಹೊಳೆಯಪ್ಪ ಕುಟುಂಬಸ್ಥರು ಗಣೇಶ ಮೂರ್ತಿ ತಯಾರಿಸುವ ಕಾಯಕ ಆರಂಭಿಸುತ್ತಾರೆ. ವಿವಿಧ ಭಂಗಿಯ ಗಣಪತಿಗಳ ತಯಾರಿಕೆಯಲ್ಲಿ ಇಡೀ ಕುಟುಂಬ ಸದಸ್ಯರು ಭಾಗಿಯಾಗುತ್ತಾರೆ. ಸೋಮವಾರ ಗಣಪತಿ ಮೂರ್ತಿಗಳು ಭರದಿಂದ ಮಾರಾಟವಾಗಲಿವೆ.

ಚಿಕ್ಕಮಗಳೂರು ಸಮೀಪದ ಮುತ್ತಾವರ ಕೆರೆ ಮುಂತಾದ ಕಡೆ ಗಣಪತಿ ಮೂರ್ತಿ ತಯಾರಿಕೆಗೆ ಅಗತ್ಯ ಮಣ್ಣನ್ನು ತಂದು ಹದ ಮಾಡಿಕೊಂಡು ಮೂರ್ತಿ ತಯಾರಿಸಲು ಆರಂಭಸಲಾಗುತ್ತದೆ. ಈ ಕಲಾವಿದರ ಕೈಯಲ್ಲಿ ಅರಳಿದ ಗಣಪ ಮೂರ್ತಿಗಳು ಜಿಲ್ಲಾದ್ಯಂತ ಖ್ಯಾತಿ ಗಳಿಸಿವೆ.

ಹೊಳೆಯಪ್ಪನವರ ಕುಟುಂಬಕ್ಕೆ ಗಣಪತಿ ಹಬ್ಬದ ಮೊದಲೆರೆಡು ತಿಂಗಳು ಇದೇ ಕಾಯಕ. ಆದರಲ್ಲಿಯೇ ಸಂಪೂರ್ಣ ಸಯಯ ಕಳೆಯುತ್ತಾರೆ. ಈ ಬಾರಿ ಸಂಗೊಳ್ಳಿ ರಾಯಣ್ಣ ಗಣಪ, ನಾರಾಯಣನ ಭಂಗಿಯ ಗಣಪ, ಗೌರಿ ತೊಡೆಯ ಮೇಲೆ ಕುಳಿತಿರುವ ಗಣಪನ ಮೂರ್ತಿಗಳು ಹೊಳೆಯಪ್ಪನವರ ಕಲೆಗೆ ಸಾಕ್ಷಿಯಾಗಿವೆ.

ಗಣಪತಿ ಮೂರ್ತಿ ಮಾಡಿಸಲು ಮುಂಗಡ ನೀಡಿದವರು ತಮ್ಮದೇ ಆಯ್ಕೆಯ ಡಿಸೈನ್‌ನೀಡುತ್ತಾರೆ. ಅದೇ ರೀತಿ ಹೊಳೆಯಪ್ಪ ಗಣಪತಿ ಮೂರ್ತಿಗಳನ್ನು ತಯಾರಿಸಿಕೊಡುತ್ತಾರೆ. ಹೊಳೆಯಪ್ಪ ಮತ್ತು ಮಕ್ಕಳು ಸುಮಾರು 850ಕ್ಕೂ ಹೆಚ್ಚು ವಿವಿಧಭಂಗಿಗಳ ಗಣಪತಿ ಮೂರ್ತಿ ನಿರ್ಮಿಸಿದ್ದಾರೆ. ಕಡೂರಿನ ಸಾರ್ವಜನಿಕ ಪ್ರಸನ್ನ ಗಣಪತಿ ಸಮಿತಿಯವರು ಪ್ರತಿಷ್ಠಾಪನೆ ಮಾಡುವ ಗಣಪನ ಮೂರ್ತಿಯನ್ನು ಕಳೆದ 36 ವರ್ಷಗಳಿಂದ ಇವರೇ ನಿರ್ಮಿಸುತ್ತಿದ್ದಾರೆ. ಹೊರ ಜಿಲ್ಲೆಗಳಿಗೂ ಇವರು ಗಣಪತಿ ಮೂರ್ತಿ ತಯಾರಿಸಿಕೊಡುತ್ತಾರೆ.

Advertisement

ಕಳೆದ ನಾಲ್ಕು ದಶಕಗಳಿಂದ ಗಣೇಶನ ಮೂರ್ತಿ ಮಾಡಿಕೊಂಡು ಬರುತ್ತಿರುವ ನಮ್ಮ ಕುಟುಂಬ ಕುಂಬಾರಿಕೆ(ಕುಡುಕೆ-ಮಡಿಕೆ)ಗಳಿಂದಲೇ ಜೀವನ ನಡೆಸುತ್ತಿದೆ. ಇದೀಗ ಕುಡಿಕೆ- ಮಡಿಕೆಗಳಿಗೆ ಬೇಡಿಕೆ ಇಲ್ಲದ ಕಾರಣಕುಲಕಸುಬಿಗೆ ಹಿನ್ನೆಡೆಯಾಗಿದೆ. ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಗೌರಿ -ಗಣೇಶಹಬ್ಬದ ಮೂರು ತಿಂಗಳು ಗಣೇಶನ ಮೂರ್ತಿಮಾಡಿಕೊಂಡು ಜೀವನ ನಿರ್ವಹಣೆ ಮಾಡಬೇಕಾಗಿದೆ ಎನ್ನುತ್ತಾರೆ ಕಲಾವಿದರು.

ಕಡೂರು ಇತಿಹಾಸದಲ್ಲಿಯೇ ಸುಮಾರು 40 ವರ್ಷಗಳ ಕಾಲ ಗಣೇಶ ಮೂರ್ತಿ ನಿರ್ಮಿಸಿ ಸೇವೆ ನೀಡುತ್ತಿದ್ದು, ಪುರಸಭೆ ಆಡಳಿತ ನಮ್ಮನ್ನು ಪರಿಗಣಿಸಿ ಗಣೇಶನನ್ನು ನಿರ್ಮಿಸಲು ಒಂದು ಸ್ಥಳ ನೀಡಿದರೆ ಇದೇಕಾಯಕ ಮುನ್ನಡೆಸಲು ಅನುಕೂಲ ವಾಗುತ್ತದೆ ಎಂಬುದು ಹೊಳೆಯಪ್ಪನವರ ಕುಟುಂಬದ ಆಶಯವಾಗಿದೆ.

ಗಣಪತಿ ತಯಾರಿಕೆ ಕಾಯಕ ಖುಷಿ ಕೊಡುತ್ತೆ
ಮಣ್ಣಿನ ಗಣಪತಿಗಳು ಮಣ್ಣಿನವೇ ಹೊರೆತು ಪಿಒಪಿ ಬಳಸಿಲ್ಲ. ಬಣ್ಣವೂ ನೈಸರ್ಗಿಕ. ಆದ್ದರಿಂದ ಪರಿಸರ ಹಾನಿ ಇಲ್ಲ. ಅಲ್ಲದೇ, ಬಣ್ಣದ ಬಳಕೆಯೂ ಮಿತವಾಗಿರುತ್ತದೆ. ಹತ್ತಿಯನ್ನು ಅಳವಡಿಸಿರುವುದರಿಂದ ಬಣ್ಣ ಮತ್ತು ಸಮಯದ ಉಳಿತಾಯವಾಗಿದೆ. ಗಣಪತಿ ಬಯಸಿ ಬರುವವರ ಕಲ್ಪನೆಗಳನ್ನು ಮೂರ್ತಿ ರೂಪಕ್ಕಿಳಿಸುವ ಕಾಯಕ ಖುಷಿ ಕೊಡುತ್ತದೆ ಎನ್ನುತ್ತಾರೆ ಹೊಳೆಯಪ್ಪ ಮತ್ತು ಅವರ ಮಗ ದೀಪು.

Advertisement

Udayavani is now on Telegram. Click here to join our channel and stay updated with the latest news.

Next