Advertisement

ಭದ್ರಾ ಕುಡಿಯುವ ನೀರಿನ ಯೋಜನೆಗೆ ಕೋಟಿ ರೂ.

04:32 PM Jun 29, 2020 | Naveen |

ಕಡೂರು: ಭದ್ರಾ ಕುಡಿಯುವ ನೀರಿನ ಶಾಶ್ವತ ತೊಂದರೆ ನಿವಾರಣೆಗೆ ಒಂದು ಕೋಟಿ ರೂ. ಮಂಜೂರಾಗಿದೆ ಎಂದು ಬೆಳ್ಳಿಪ್ರಕಾಶ್‌ ಹೇಳಿದರು.

Advertisement

ಭಾನುವಾರ ತರೀಕೆರೆ ಸಮೀಪದ ಕುಡಿಯುವ ನೀರಿನ ಶುದ್ಧೀಕರಣ ಘಟಕದ ವೀಕ್ಷಣೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಕವಳ್ಳಿ ಡ್ಯಾಂನಿಂದ ಪೈಪ್‌ ಲೈನ್‌ ಮೂಲಕ ಕಡೂರು-ಬೀರೂರು ಪಟ್ಟಣಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯಿಂದ ಹಲವಾರು ವರ್ಷಗಳಿಂದ ಕುಡಿಯುವ ನೀರಿಗೆ ತೊಂದರೆಯಾಗದಂತೆ ಪಟ್ಟಣದ ಜನತೆ ನೆಮ್ಮದಿಯಿಂದ ನೀರು ಕುಡಿಯುತ್ತಿದ್ದು, ಲಕ್ಕವಳ್ಳಿ ಮತ್ತು ತರೀಕೆರೆ ಸಮೀಪದ ಶುದ್ಧೀಕರಣ ಘಟಕಗಳಲ್ಲಿ ಪದೇ ಪದೆ ಪಂಪ್‌ ಗಳು ದುರಸ್ತಿಗೆ ಬರುತ್ತಿತ್ತು. ಇದರ ಶಾಶ್ವತ ಪರಿಹಾರಕ್ಕೆ ಒಂದು ಕೋಟಿ ರೂ. ಮಂಜೂರಾಗಿದ್ದು, ಟೆಂಡರ್‌ ಕರೆಯಲಾಗಿದೆ ಎಂದು ತಿಳಿಸಿದರು.

ಶುದ್ದಿಕರಣ ಘಟಕಗಳಲ್ಲಿ ಪಂಪ್‌ ಗಳು ಪದೇ ಪದೇ ಕೈಕೊಡುವುದರಿಂದ ಪಟ್ಟಣಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತಿರುವುದು ಸಾಮಾನ್ಯವಾಗಿದೆ. ಶಾಶ್ವತ ಪರಿಹಾರಕ್ಕಾಗಿ ಎರಡು ಹೊಸ ಪಂಪ್‌ ಗಳನ್ನು ಖರೀದಿ ಮಾಡಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಒಂದು ಪಂಪ್‌ ಖರೀದಿಸಿಲು 65 ಲಕ್ಷ ರೂ. ವೆಚ್ಚವಾಗುತ್ತಿತ್ತು. ಎರಡು ಹೊಸ ಪಂಪ್‌ ಗಳನ್ನು ಅಳವಡಿಕೆ ಮಾಡುವುದರಿಂದ ನೀರಿಗಾಗಿ ಪದೇ ಪದೆ ಅನುಭವಿಸುವ ತೊಂದರೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದರು.

ಘಟಕದ ಕಟ್ಟಡಕ್ಕೆ ಸುಣ್ಣ-ಬಣ್ಣ ಕಾರ್ಯ ಪೂರ್ಣಗೊಳಿಸಲಾಗಿದೆ. ಘಟಕದ ಆವರಣದ ಸುತ್ತ ವಿದ್ಯುತ್‌ ದೀಪಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ನಾವು ಸೂಚಿಸಿದ ಕಾರ್ಯಗಳಲ್ಲಿ ಶೇ.50 ಕಾಮಗಾರಿಗಳು ಮುಗಿದಿವೆ ಎಂದರು. ಮುಂಬರುವ ದಿನಗಳಲ್ಲಿ ಕಡೂರು-ಬೀರೂರು ಪಟ್ಟಣಗಳಿಗೆ ಯಾವುದೇ ರೀತಿಯ ಕುಡಿಯುವ ನೀರಿನ ತೊಂದರೆಯಾಗದಂತೆ ಅನುಕೂಲಕರವಾಗಲು ಈಗಿನಿಂದಲೇ ಜವಾಬ್ದಾರಿ ಯುತವಾಗಿ ಕಾರ್ಯನಿರ್ವಹಿಸಲು ತಿಂಗಳಲ್ಲಿ ಎರಡು ಬಾರಿಯಾದರೂ ಪಂಪ್‌ ಹೌಸ್‌ಗಳಿಗೆ ಭೇಟಿ ನೀಡಲಾಗುವುದು. ಪಂಪ್‌ಹೌಸ್‌ಗಳಲ್ಲಿ ರಾತ್ರಿ ಪಾಳೆಯದಲ್ಲಿ ಕಾರ್ಯನಿರ್ವಹಿಸುವ ಕೆಲಸಗಾರರಿಗೆ ವಿಶ್ರಾಂತಿ ಕೊಠಡಿ ವ್ಯವಸ್ಥೆ ಕಲ್ಪಿಸಲು ಅಂದಾಜಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಬೀರೂರು ಪುರಸಭಾ ಸದಸ್ಯರಾದ ಸುದರ್ಶನ್‌, ಮಾರ್ಗದ ಮಧು, ಮುಖಂಡ ಕೆ.ಆರ್‌. ಚಂದ್ರು ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next