Advertisement

ಕಡೂರು: ಕೋವಿಡ್‌ ಪರಿಹಾರ ನಿಧಿಗೆ ದೇಣಿಗೆ

04:10 PM May 16, 2020 | Naveen |

ಕಡೂರು: ಪ್ರಧಾನ ಮಂತ್ರಿಗಳ ಕೋವಿಡ್ -19 ಪರಿಹಾರ ನಿಧಿಗೆ ಕಡೂರು ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳು ಶಾಸಕ ಬೆಳ್ಳಿಪ್ರಕಾಶ್‌ ಅವರ ಮೂಲಕ ಡಿಡಿಯನ್ನು ನೀಡಿದರು.

Advertisement

ಎಲ್‌ಐಸಿ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಸೀಗೆಹಡ್ಲು ಹರೀಶ್‌ ನೇತೃತ್ವದಲ್ಲಿ ಶುಕ್ರವಾರ ಜೀವವಿಮಾ ಪ್ರತಿನಿಧಿಗಳು ಶಾಸಕರ ಕಚೇರಿಗೆ ತೆರಳಿ 20 ಸಾವಿರ ರೂ.ಗಳ ಡಿಡಿಯನ್ನು ಶಾಸಕರಿಗೆ ಹಸ್ತಾಂತರಿಸಿದರು. ಯೂನಿಯನ್‌ ಅಧ್ಯಕ್ಷ ಸೀಗೆಹಡ್ಲು ಹರೀಶ್‌ ಮಾತನಾಡಿ ದೇಶವೇ ಕೋವಿಡ್ ಮಹಾಮಾರಿಗೆ ತತ್ತರಿಸಿದ್ದು ಇಂತಹ ಸಮಯದಲ್ಲಿ ಕಡೂರು ಎಲ್‌ಐಸಿ ಶಾಖೆಯ ಪ್ರತಿನಿಧಿಗಳ ಯೂನಿಯನ್‌ ಸಭೆ ನಡೆಸಿ ರಾಜ್ಯ ಮತ್ತು ದೇಶದಲ್ಲಿ ಪ್ರಕೃತಿ ವಿಕೋಪ ಮತ್ತಿತರ ಸಮಸ್ಯೆಗಳು ಬಂದಾಗ ನಮ್ಮ ಪ್ರತಿನಿಧಿ ಸ್ನೇಹಿತರು ಕೈಲಾದ ಸಹಾಯವನ್ನು ಮಾಡುತ್ತ ಬಂದಿದ್ದು ಇದೀಗ ಪ್ರಧಾನಮಂತ್ರಿಗಳ ಕೋವಿಡ್‌-19 ಪರಿಹಾರ ನಿಧಿಗೆ ಸಹಾಯ ನೀಡಲು ಮುಂದಾಗಿದ್ದು, ಕ್ಷೇತ್ರದ ಶಾಸಕರ ಮೂಲಕ ಡಿಡಿಯನ್ನು ನೀಡಿದ್ದೇವೆ ಎಂದರು.

ಶಾಸಕ ಬೆಳ್ಳಿಪ್ರಕಾಶ್‌ ಮಾತನಾಡಿ ತಾಲೂಕಿನಾದ್ಯಂತ ಅನೇಕ ಸಂಘ,ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ, ಡಿಡಿಯನ್ನು ಪ್ರಧಾನ ಮಂತ್ರಿಗಳ ಕೋವೀಡ್‌-19 ಖಾತೆಗೆ ಕೂಡಲೆ ಕಳುಹಿಸಿಕೊಡಲಾಗುವುದಾಗಿ ತಿಳಿಸಿದರು. ಎಲ್‌ಐಸಿ ಪ್ರತಿನಿ ಧಿಗಳಾದ ಬಿ.ಎನ್‌.ಪ್ರಕಾಶ್‌, ಎಸ್‌.ಟಿ.ಚಂದ್ರಪ್ಪ, ಚಂದ್ರಶೇಖರ್‌, ಯಳ್ಳಂಬಳಸೆ ಜಗದೀಶ್‌, ಎಂ.ಎನ್‌. ಜಗದೀಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next