Advertisement

ಉಪ್ಪಳದಲ್ಲಿ ತೀವ್ರ ಕಡಲ್ಕೊರೆತ

01:51 AM Jun 13, 2019 | Team Udayavani |

ಉಪ್ಪಳ: ಮೂಸೋಡಿ ಹಾಗೂ ಶಾರದಾ ನಗರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಹಲವು ಮನೆಗಳು ಅಪಾಯದಂಚಿನಲ್ಲಿವೆ. ಶಾರದಾ ನಗರದ ಮೀನು ಕಾರ್ಮಿಕರಾದ ಶಕುಂತಳಾ ಸಾಲ್ಯಾನ್‌, ಸುನಂದಾ, ಶಶಿಕಲಾ ಅವರ ಮನೆಗಳು ಅಪಾಯದಂಚಿನಲ್ಲಿದ್ದು, ಈ ಮನೆಗಳವರೆಗೆ ಸಮುದ್ರದ ನೀರು ತಲುಪಿದೆ. ಅಲೆಗಳು ಗೋಡೆಗೆ ಬಡಿಯುತ್ತಿದೆ.

Advertisement

ಈ ಪ್ರದೇಶದಲ್ಲಿದ್ದ ತಡೆಗೋಡೆ ಹಲವು ವರ್ಷಗಳ ಹಿಂದೆಯೇ ಸಮುದ್ರ ಪಾಲಾಗಿದೆ. ಅದೇ ರೀತಿ ಮೂಸೋಡಿಯಲ್ಲಿ ಕಡಲ್ಕೊರೆತದಿಂದ ಇಸ್ಮಾಯಿಲ್ ಅವರ ಸ್ಥಳದಲ್ಲಿದ್ದ ಗಾಳಿ ಮರಗಳು ಸಮುದ್ರ ಪಾಲಾಗಿವೆ. ಕಿಳಿರಿಯ ಮಸೀದಿ ಮತ್ತು 8 ಮನೆಗಳು ಅಪಾಯದಂಚಿನಲ್ಲಿವೆ. ಮೊಹಮ್ಮದ್‌, ನಫೀಸ ಅವರ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಹೆದ್ದಾರಿಗೆ ಉರುಳಿದ ಮರ
ಮೊಗ್ರಾಲ್ ಪುತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್‌ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕಾಸರಗೋಡಿನ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಮರವನ್ನು ಕಡಿದು ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಸುಗಮಗೊಂಡಿತು. ಜೂ. 8ರಿಂದ ಮಳೆ ಆರಂಭಗೊಂಡ ಬಳಿಕ ಜಿಲ್ಲೆಯ 4.7 ಹೆಕ್ಟೇರ್‌ ಜಾಗದಲ್ಲಿ ಕೃಷಿ ಹಾನಿ ಸಂಭವಿಸಿದೆ. 10 ಮನೆಗಳು ಭಾಗಶಃ ಹಾನಿಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next