Advertisement

ಕಡೆಪಾಲ: ಆಕಸ್ಮಿಕ ಬೆಂಕಿ ಅವಘಡ

12:22 AM Apr 04, 2024 | Team Udayavani |

ಅರಂತೋಡು: ಸಂಪಾಜೆ ಗ್ರಾಮದ ಕಡೆಪಾಲ ಬಳಿ ಆಕಸ್ಮಿಕವಾಗಿ ಗುಡ್ಡಕ್ಕೆ ಬೆಂಕಿ ತಗುಲಿದ ಘಟನೆ ಇಂದು ನಡೆದಿದೆ.

Advertisement

ಈ ಜಾಗ ಖಾಸಗಿಯವರಿಗೆ ಸೇರಿದ ಜಾಗವಾಗಿದೆ ಎಂದು ತಿಳಿದು ಬಂದಿದೆ. ಗುಡ್ಡದ ಸ್ವಲ್ಪ ಭಾಗ ಉರಿದಿದೆ. ಬಳಿಕ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಲಾಯಿತು.

ಸುಳ್ಯ ವಲಯಾರಣ್ಯಧಿಕಾರಿ ಮಂಜುನಾಥ್‌ ಅವರನ್ನು ಸಂಪರ್ಕಿಸಿದಾಗ ಖಾಸಗಿ ಯವರ ಮನೆಗೆ ಹೋಗುವ ಜಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದ ಕಾರಣ ಗುಡ್ಡದ ಸ್ವಲ್ಪ ಭಾಗ ಸುಟ್ಟು ಹೋಯಿತು. ಬಳಿಕ ಬೆಂಕಿ ನಂದಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next