Advertisement

ಕಾಪು ಕಡಲ ಕಿನಾರೆಯಲ್ಲಿ ಕಡಲ ಐಸಿರ ಬೀಚ್‌ ಫೆಸ್ಟ್‌ 2022 ಸಮಾಪನ

12:35 PM Dec 19, 2022 | Team Udayavani |

ಕಾಪು: ಲಾಲ್‌ ಬಹದ್ದೂರ್‌ ಶಾಸ್ತ್ರಿ ಸ್ಪೋರ್ಟ್ಸ್ ಆ್ಯಂಡ್‌ ಕಲ್ಚರಲ್‌ ಕ್ಲಬ್‌ ಕಾಪು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಪು ಪಡು ಮತ್ತು ದಿ| ಆರ್‌. ಡಿ. ಮೆಂಡನ್‌ ಕಾಪು ಸ್ಮರಣಾರ್ಥ ಜನ್ಮ ಶತಮಾನೋತ್ಸವ ಆಚರಣಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಶಾಸಕ ಲಾಲಾಜಿ ಆರ್‌. ಮೆಂಡನ್‌ ಅವರ ನೇತೃತ್ವದಲ್ಲಿ ಕಾಪು ಬೀಚ್‌ನಲ್ಲಿ ನಡೆಯುತ್ತಿರುವ ಕಡಲ ಐಸಿರ – ಬೀಚ್‌ ಫೆಸ್ಟ್‌ 2022 ಕಾರ್ಯಕ್ರಮವು ಭಾರೀ ವೈಭವದೊಂದಿಗೆ ಸಂಪನ್ನಗೊಂಡಿತು.

Advertisement

ಸಹಸ್ರಾರು ಜನರು ಭಾಗಿ: ರವಿವಾರ ದಿನವಿಡೀ ಸಾವಿರಾರು ಮಂದಿ ಪ್ರವಾಸಿಗರು ಕಾಪು ಬೀಚ್‌ಗೆ ಆಗಮಿಸಿದ್ದು ಸಂಜೆ ಫುಲ್‌ ರಶ್‌ ಕಂಡು ಬಂದಿದೆ. ಐವತ್ತು ಸಾವಿರಕ್ಕೂ ಅಧಿಕ ಮಂದಿ ಬೀಚ್‌ ಉತ್ಸವದಲ್ಲಿ ಪಾಲ್ಗೊಂಡಿದ್ದು ಬೀಚ್‌ ಫೆಸ್ಟ್‌ನ ಸಂಭ್ರಮೋತ್ಸವದಲ್ಲಿ ತೇಲಾಡಿದರು.

120ಕ್ಕೂ ಹೆಚ್ಚು ಶ್ವಾನಗಳು ಸ್ಪರ್ಧೆಯಲ್ಲಿ ಭಾಗಿ : ಕಾಪು ಬೀಚ್‌ನಲ್ಲಿ ಪ್ರಥಮ ಬಾರಿಗೆ ನಡೆದ ಶ್ವಾನ ಪ್ರದರ್ಶನ ಮತ್ತು ಸ್ಫರ್ಧೆಯಲ್ಲಿ 22 ತಳಿಯ 128 ಕ್ಕೂ ಅಧಿಕ ಶ್ವಾನಗಳು ಭಾಗವಹಿಸಿದ್ದವು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ವಿವಿಧ ಕಡೆಗಳಿಂದಲೂ ಶ್ವಾನಗಳು ಪ್ರದರ್ಶನಕ್ಕೆ ಬಂದಿದ್ದವು. ಬೀಚ್‌ ವಾಲಿಬಾಲ್‌ ರೋಚಕವಾಗಿ ನಡೆದಿದ್ದು, ಮರಳು ಶಿಲ್ಪ ರಚನೆ, ಗಾಳಿ ಪಟ ಸ್ಪರ್ಧೆಗೂ ಉತ್ತಮ ಪ್ರೋತ್ಸಾಹ ದೊರಕಿದೆ.

Advertisement

ತಬಲಾ-ಕೊಳಲು ಜುಗಲ್‌ಬಂದಿ, ಚೆಂಡೆ ಸ್ಪರ್ಧೆಗೆ ಭಾರೀ ಸ್ಪಂಧನೆ : ಬೀಚ್‌ ಫೆಸ್ಟ್‌ ಪ್ರಯುಕ್ತ ನಡೆದ ತಬಲಾ ಮತ್ತು ಕೊಳಲು ವಾದನ, ಚಂಡೆ ಸ್ಪರ್ಧೆಯಲ್ಲಿ ಹತ್ತಾರು ತಂಡಗಳು ಭಾಗವಹಿಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯ ಮತ್ತು ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಸಂಗೀತ ರಸಮಂಜರಿ ಮತ್ತು ಲೇಸರ್‌ ಶೋ ಜನಮನ ಸೂರೆಗೊಳಿಸಿದೆ.

ಗಣ್ಯರ ಉಪಸ್ಥಿತಿ : ಉಡುಪಿ ಜಿಲ್ಲಾಧಿಕಾರಿ ಡಾ| ಕೂರ್ಮಾ ರಾವ್‌, ಪೊಲೀಸ್‌ ವರಿಷ್ಟಾಧಿಕಾರಿ ಅಕ್ಷಯ್‌ ಹಾಕೆ ಮಚೀಂದ್ರ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕ‌ ಡಾ| ದೇವಿಪ್ರಸಾದ್‌ ಶೆಟ್ಟಿ, ಸುದಾಮ ಶೆಟ್ಟಿ, ಗಂಗಾಧರ ಸುವರ್ಣ, ಶಂಕರ ಕುಂದರ್‌, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಅದಾನಿ – ಯುಪಿಸಿಎಲ್‌ ಅಧ್ಯಕ್ಷ ಕಿಶೋರ್‌ ಆಳ್ವ, ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್‌, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಗುರುಪ್ರಸಾದ್‌ ಶೆಟ್ಟಿ, ಗೃಹರಕ್ಷಕದಳದ ಸಮಾದೇಷ್ಟ ಡಾ| ಕೆ. ಪ್ರಶಾಂತ್‌ ಶೆಟ್ಟಿ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.

ದಿ| ಆರ್‌. ಡಿ. ಮೆಂಡನ್‌ ಕಾಪು ಸ್ಮರಣಾರ್ಥ ಜನ್ಮ ಶತಮಾನೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಕೃಷ್ಣ ಆರ್‌. ಮೆಂಡನ್‌, ಇಂದಿರಾ ಲಾಲಾಜಿ ಮೆಂಡನ್‌, ಕಾಪು ಮೊಗವೀರ ಮಹಾಸಭಾದ ಅಧ್ಯಕ್ಷ ಕುಶ ಸಾಲ್ಯಾನ್‌, ಮೊಗವೀರ ಮಹಿಳಾ ಮಂಡಳಿಯ ಅಧ್ಯಕ್ಷೆ ಉಷಾ ಪುತ್ರನ್‌ ಲಾಲ್‌ ಬಹದ್ದೂರ್‌ ಶಾಸ್ತ್ರಿ ನ್ಪೋರ್ಟ್ಸ್ ಆಂಡ್‌ ಕಲ್ಚರಲ್‌ ಕ್ಲಬ್‌ನ ಅಧ್ಯಕ್ಷ ಶೀಲರಾಜ್‌ ಪುತ್ರನ್‌, ಉಪಾಧ್ಯಕ್ಷ ಆನಂದ ಶ್ರೀಯಾನ್‌, ಪ್ರಧಾನ ಕಾರ್ಯದರ್ಶಿ ಸಚಿನ್‌ ಪುತ್ರನ್‌, ಸಂತೋಷ್‌ ಶ್ರೀಯಾನ್‌, ಸುಜಿತ್‌ ಸುವರ್ಣ, ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next