Advertisement

Kadaba: ಹಾಲಿನ ಟ್ಯಾಂಕರ್‌ ಪಲ್ಟಿ

01:10 AM Apr 15, 2023 | Team Udayavani |

ಕಡಬ: ಕೆಎಂಎಫ್ಗೆ ಹಾಲು ಸರಬರಾಜು ಮಾಡುವ ಟ್ಯಾಂಕರ್‌ ಒಂದು ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ಧಾರಿಯ ಕುಂತೂರು ಗ್ರಾಮದ ಮುರಚೆಡವು ಎಂಬಲ್ಲಿ ಶುಕ್ರವಾರ ಸಂಜೆ ಪಲ್ಟಿಯಾಗಿ ಸಾವಿರಾರು ಲೀಟರ್‌ ಹಾಲು ನಷ್ಟವಾಗಿದೆ.

Advertisement

ಮುರಚೆಡವು ತಿರುವಿನಲ್ಲಿ ಚಾಲಕ ಶಶಿಧರ ಎಂಬವರ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಟ್ಯಾಂಕರ್‌ ಚರಂಡಿಗೆ ಬಿದ್ದಿದೆ. ಪಲ್ಟಿಯಾದ ರಭಸಕ್ಕೆ ಹಾಲು ಚರಂಡಿಗೆ ಚೆಲ್ಲಿದ್ದು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ಧಾರೆ. ಉದನೆಯಿಂದ ಕಲ್ಲುಗುಡ್ಡೆ, ಕಡಬ ಮುಖಾಂತರ ಪದವು ಹಾಲಿನ ಸೊಸೈಟಿಯ ಹಾಲನ್ನು ಸಂಗ್ರಹಿಸಿ ಮಂಗಳೂರಿನ ಕೆಎಂಎಫ್ಗೆ ಹೋಗಬೇಕಾಗಿದ್ದ ಟ್ಯಾಂಕರ್‌ ದಾರಿ ಮಧ್ಯದಲ್ಲೇ ಚರಂಡಿಗೆ ಬಿದ್ದಿದೆ. ಸುಮಾರು ಹನ್ನೆರಡು ಸಾವಿರ ಲೀಟರ್‌ ಹಾಲು ಚರಂಡಿ ಪಾಲಾಗಿದೆ. ರಾತ್ರಿ ಹೊತ್ತಿಗೆ ಟ್ಯಾಂಕರನ್ನು ಕ್ರೇನ್‌ ಮೂಲಕ ಮೇಲೆತ್ತಲಾಗಿದೆ. ಸ್ಥಳಕ್ಕೆ ಕಡಬ ಪೋಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ಧಾರೆ.

Advertisement

Udayavani is now on Telegram. Click here to join our channel and stay updated with the latest news.

Next