Advertisement

ಕಡಬ ಐತೂರು ಗ್ರಾ.ಪಂ. ಪಿಡಿಒ ಬೆಳ್ತಂಗಡಿಯಲ್ಲಿ ಎಸಿಬಿ ಬಲೆಗೆ

12:18 PM Jun 04, 2019 | keerthan |

ಬೆಳ್ತಂಗಡಿ: ಕಡಬ ತಾಲೂಕಿನ ಐತೂರು ಗ್ರಾ.ಪಂ. ಪಿಡಿಒ ಪ್ರೇಮ್‌ ಸಿಂಗ್‌ ನಾಯಕ್‌ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿ¨ರೆ.

Advertisement

ಕಡಬ ತಾಲೂಕು ಸುಂಕದಕಟ್ಟೆ ನಿವಾಸಿ ಶಾಹುಲ್‌ ಹಮೀದ್‌ ಅವರು ತಾಯಿಯ ಹೆಸರಿಂದ ತನ್ನ ಹೆಸರಿಗೆ 10 ಸೆಂಟ್ಸ್‌ ಜಾಗದ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ 8 ಸಾ.ರೂ. ಪಿಡಿಒ ಖಾತೆಗೆ ಜಮಾ ಮಾಡಿದ್ದರು. ಬಳಿಕ 10 ಸಾ. ರೂ. ಬೇಡಿಕೆ ಇಟ್ಟಿದ್ದರು. ಸೋಮವಾರ ಮಂಗಳೂರಿನಲ್ಲಿ ಪಿಡಿಒಗಳ ಸಭೆ ಇದ್ದ ಕಾರಣ ಗುರುವಾಯನಕೆರೆಗೆ ಬರ ಹೇಳಿದ್ದರು. ಸಂಜೆ ಶಾಹುಲ್‌ ಹಮೀದ್‌ ಪಿಡಿಒ ಪ್ರೇಮ್‌ ಸಿಂಗ್‌ ನಾಯಕ್‌ಗೆ 9 ಸಾ. ರೂ. ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ¨ªಾರೆ.

ಪಶ್ಚಿಮ ವಲಯ ಎಸಿಬಿ ಎಸ್ಪಿ ಉಮಾ ಪ್ರಶಾಂತ್‌ ಅವರ ನಿರ್ದೇಶನದ ಮೇರೆಗೆ ಇನ್‌ಸ್ಪೆ ಕ್ಟರ್‌ ಮೋಹನ್‌ ಕೊಟ್ಟಾರಿ, ಉಡುಪಿ ಇನ್‌ಸ್ಪೆ ಕ್ಟರ್‌ ಜಯರಾಂ ಗೌಡ, ಸಿಬಂದಿ ವರ್ಗದ ಹರಿಪ್ರಸಾದ್‌ , ರಾಧಾಕೃಷ್ಣ ಡಿ.ಎ., ರಾಧಾಕೃಷ್ಣ ಕೆ., ಪ್ರಶಾಂತ್‌, ರಾಕೇಶ್‌, ಅಬ್ದುಲ್‌ ಜಲಾಲ…, ನಯನಾ, ವೈಶಾಲಿ, ಉಮೇಶ್‌, ಗಣೇಶ್‌, ಪ್ರಸನ್ನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next