Advertisement

ಕಬಕ: ನಾಗ, ಪಂಚದೈವಗಳ ಪ್ರತಿಷ್ಠಾ ಮಹೋತ್ಸವ

12:27 PM Mar 15, 2017 | Team Udayavani |

ಕಬಕ: ಇಲ್ಲಿನ ವಿದ್ಯಾಪುರ (ಬದಿಯಡ್ಕ) ನಾಗ ಮತ್ತು ಪಂಚದೈವಗಳ ಪ್ರತಿಷ್ಠಾ ಮಹೋತ್ಸವ ವೇದಮೂರ್ತಿ ಮಿತ್ತೂರು  ದಾಸಮೂಲೆ ತಿರುಮಲೇಶ್ವರ ಭಟ್‌ ಅವರ ನೇತೃತ್ವದಲ್ಲಿ ನಡೆಯಿತು.

Advertisement

ಸಪ್ತಶುದ್ಧಿ, ಪುಣ್ಯಾಹ ವಾಚನ, ಪ್ರಸಾದ ವಾಸ್ತುಪೂಜೆ, ವಾಸ್ತುಬಲಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ಅಧಿವಾಸಹೋಮ, ಕಲಶಪ್ರತಿಷ್ಠೆ, ಪುಣ್ಯಾಹ ವಾಚನ, ಗಣಪತಿ ಹೋಮ, ಪ್ರತಿಷ್ಠಾಂಗಹೋಮ, ಶ್ರೀ ನಾಗದೇವರ ಪ್ರತಿಷ್ಠೆ, ರಕ್ತೇಶ್ವರಿ, ಪಂಜುರ್ಲಿ, ಧೂಮಾವತಿ ವ್ಯಾಘ್ರಚಾಮುಂಡಿ, ಗುಳಿಗದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ದೈವಗಳಿಗೆ ತಂಬಿಲ ಪೂಜೆ, ಮಹಾಪೂಜೆ, ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ನಡೆಯಿತು.

ಶ್ರೀಕ್ಷೇತ್ರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮತ್ತು ಶ್ರೀ  ಕಣಿಯೂರು ಮಠದ ಮಹಾಬಲ ಸ್ವಾಮೀಜಿ ಆಶೀರ್ವಚನ ನೀಡಿದರು, ಅಕ್ಷತಾ ಗೋಕುಲೆ ದಾರ್ಮಿಕ ಉಪನ್ಯಾಸ ನೀಡಿದರು, ಕಬಕ ಗ್ರಾ.ಪಂ. ಅಧ್ಯಕ್ಷೆ ಪ್ರೀತಾ ಬಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ, ಜಿ.ಪಂ. ಸದಸ್ಯೆ ಶಯನಾ ಜಯಾನಂದ, ತಾ.ಪಂ. ಸದಸ್ಯೆ ದಿವ್ಯಾಪುರುಷೋತ್ತಮ  ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮಿಥುನ್‌ ರಾಜ್‌, ನಿಖೀಲ್‌ರಾಜ್‌ ವಿದ್ಯಾಪುರ ಬಳಗದವರಿಂದ ಭಕ್ತಿಗಾನ ಸುಧಾ ನಡೆಯಿತು.
 

Advertisement

Udayavani is now on Telegram. Click here to join our channel and stay updated with the latest news.

Next