Advertisement

ಹೊಸ್ಮಠ ಹಳೇ ಸೇತುವೆ ಬದಲು ಕಟ್ಟಿಸಿದ ಹೊಸ ಸೇತುವೆಗೂ ಮುಳುಗಡೆ ಭೀತಿ!

12:32 PM Aug 09, 2018 | Team Udayavani |

ಕಡಬ: ಜನರು ಹಾಗೂ ವಾಹನಗಳ ಸುರಕ್ಷಿತ ಸಂಚಾರದ ಹಿನ್ನೆಲೆಯಲ್ಲಿ ಕಡಬ ಸಮೀಪದ ಹೊಸ್ಮಠದ ಹಳೆ ಸೇತುವೆ ಭಾರೀ ಪ್ರವಾಹದಿಂದ ಮುಳುಗಡೆಯಾಗುತ್ತದೆ ಎಂದು ಹೊಸ ಸೇತುವೆ ನಿರ್ಮಿಸಲಾಗುತ್ತಿದೆ. ಆದರೆ ವಿಪರ್ಯಾಸ ಎಂಬಂತೆ ಇದೀಗ ಹೊಸ ಸೇತುವೆ ಕೂಡಾ ಮುಳುಗಡೆ ಭೀತಿ ಎದುರಿಸುತ್ತಿದೆ.

Advertisement

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗುಂಡ್ಯ ಹೊಳೆ ಉಕ್ಕಿ ಹರಿಯುತ್ತಿದ್ದು, ಉಪ್ಪಿನಂಗಡಿ  ಕಡಬ ಸುಬ್ರಹ್ಮಣ್ಯ ಸಂಪರ್ಕ ಕಲ್ಪಿಸುವ ಹೊಸ್ಮಠ ಹಳೆ ಸೇತುವೆ ಎರಡು ದಿನಗಳ ಹಿಂದೆಯೇ ಮುಳುಗಡೆಯಾಗಿದ್ದು ಈಗ ಹೊಸ ಸೇತುವೆಯೂ ಮುಳುಗಡೆ ಭೀತಿಯಲ್ಲಿದೆ. 

ಕಳೆದ ನಾಲ್ಕು ವರ್ಷಗಳಿಂದ ಸೇತುವೆ ಕಾಮಗಾರಿ ನಡೆಯುತ್ತಿದ್ದರೂ ಇನ್ನು ಮುಗಿದಿಲ್ಲ. ಸೇತುವೆಯ ಎತ್ತರದ ಬಗ್ಗೆ ಪ್ರಾರಂಭದಲ್ಲಿ ಸ್ಥಳೀಯರು ಆಕ್ಷೇಪ ವ್ಯಕ್ತ ಪಡಿಸಿದ್ದರೂ ಸೇತುವೆಯ ಕಾಮಗಾರಿ ನಡೆಸುತ್ತಿರುವ ರಾಜ್ಯ ರಸ್ತೆ ಅಭಿವೃದ್ದಿ ನಿಗಮ ಕೆಲಸ ಆರಂಭಿಸಿತ್ತು. ಈ ಬಗೆಗೆ ಸುಳ್ಯ ಶಾಸಕ ಎಸ್.ಅಂಗಾರ ಅವರು ನಿಗಮಕ್ಕೆ ಪತ್ರ ಬರೆದಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. 

ಹಳೇ ಸೇತುವೆ ಮುಳುಗಡೆಯಾಗುತ್ತದೆ ಎಂದು ಇದೀಗ ಹೊಸದಾಗಿ ನಿರ್ಮಿಸುತ್ತಿರುವ ಸೇತುವೆ ಕೂಡಾ ಭಾರೀ ಮಳೆ ಹಾಗೂ ಪ್ರವಾಹದಿಂದ ಮುಳುಗಿದರೆ ಸಂಪರ್ಕ ಮತ್ತಷ್ಟು ಕಷ್ಟವಾಗುತ್ತದೆ. ಈ ಹೊಸ ಸೇತುವೆ ನಿರ್ಮಿಸುವಾಗ ಇಂಜಿನಿಯರ್ ಆಗಲಿ ಅಥವಾ ತಜ್ಞರಾಗಲಿ ಈ ಬಗ್ಗೆ ಯಾಕೆ ಗಮನ ಹರಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next