Advertisement

ಪಂಜಾಬ್ ನ ಕಬಡ್ಡಿ ಆಟಗಾರನನ್ನು ಗುಂಡಿಕ್ಕಿ ಕೊಂದ ಪೊಲೀಸರು

05:25 PM May 10, 2020 | keerthan |

ಕಪುರ್ತಲ: ಪಂಜಾಬ್ ಪೊಲೀಸ್ ಇಲಾಖೆಯ ಸಹಾಯಕ ಸಬ್ ಇನ್ಸಪೆಕ್ಟರ್ ಒಬ್ಬರು ಗಡಿಬಿಡಿಯಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಪಟುವನ್ನು ಗುಂಡಿಕ್ಕಿ ಕೊಂದ ಘಟನೆ ಪಂಜಾಬ್ ನ ಕಪುರ್ತಲದಲ್ಲಿ ನಡೆದಿದೆ.

Advertisement

24 ವರ್ಷದ ಕಬಡ್ಡಿ ತಾರೆ ಅರ್ವಿಂದರ್ ಜಿತ್ ಸಿಂಗ್ ಪೊಲೀಸರ ಗುಂಡೇಟಿನ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತನ ಗೆಳೆಯ ಪ್ರದೀಪ್ ಸಿಂಗ್ ಆಸ್ಪತ್ರೆಯಲ್ಲಿ ವಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರ್ವಿಂದರ್ ಸಿಂಗ್ ಮತ್ತು ಆತನ ಗೆಳೆಯರು ಕಬಡ್ಡಿ ಅಭ್ಯಾಸ ಮುಗಿಸಿ ಬರುವಾಗ ರಸ್ತೆಬದಿಯಲ್ಲಿ ಅನುಮಾನಸ್ಪದ ಕಾರು ನಿಂತಿದ್ದನ್ನು ನೋಡಿ ವಿಚಾರಿಸಿದ್ದಾರೆ. ಆಗ ಅದರಲ್ಲಿ ಎ ಎಸ್ ಐ ಮತ್ತು ಆತನ ಗೆಳೆಯಬಿದ್ದು, ಕಬಡ್ಡಿ ಆಟಗಾರರು ಮತ್ತು ಎಎಸ್ ಐ ನಡುವೆ ಜಗಳವಾಗಿದೆ. ತಕ್ಷಣ ಎಎಸ್ ಐ ತನ್ನ ಸೇವಾ ರಿವಾಲ್ವರ್ ನಿಂದ ಗುಂಡು ಹಾರಿಸಿದ್ದಾರೆ.

ಎಎಸ್ ಐ ಮತ್ತು ಆತನ ಸ್ನೇಹಿತನನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next