Advertisement

Darshan- Aradhana: ಕಾಟೇರ ಅದ್ಧೂರಿ ಪ್ರೀ-ರಿಲೀಸ್‌ ಇವೆಂಟ್

09:21 AM Dec 25, 2023 | Team Udayavani |

ನಟ ದರ್ಶನ್‌ ಅಭಿನಯದ ನಟನೆಯ “ಕಾಟೇರ’ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಸದ್ಯ ಭರದಿಂದ “ಕಾಟೇರ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ, ಡಿ. 23ರ ಶನಿವಾರ ಮಂಡ್ಯದಲ್ಲಿ ಅದ್ಧೂರಿಯಾಗಿ ಪ್ರೀ-ರಿಲೀಸ್‌ ಇವೆಂಟ್‌ ಮತ್ತು ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ನಡೆಸಿತು.

Advertisement

ಮಂಡ್ಯದ ಜನತೆಯ ಎದುರು “ಕಾಟೇರ’ ಸಿನಿಮಾದ ಥೀಮ್‌ ಸಾಂಗ್‌ ಅನ್ನು ನಟಿ ಮತ್ತು ಸಂಸದೆ ಸುಮಲತಾ ಅಂಬರೀಶ್‌ ರಿಲೀಸ್‌ ಮಾಡಿದರು. “ನೆತ್ತರಲ್ಲಿ ನೆಂದ ಭೂಮಿ…’ ಎಂದು ಶುರುವಾಗುವ ಹಾಡಿನಲ್ಲಿ ಮಣ್ಣು, ರೈತರ ಹಕ್ಕು ಮತ್ತು ಭಾವನೆಗಳನ್ನು ಬಣ್ಣಿಸಲಾಗಿದ್ದು, “ರೈತರ ದಿನ’ದಂದೇ ಈ ಹಾಡನ್ನ ರಿಲೀಸ್‌ ಮಾಡಿರುವುದು ವಿಶೇಷ.  “ನನ್ನ ಮಣ್ಣು, ನನ್ನ ಹಕ್ಕು..’ ಹಾಡಿಗೆ ಪುನೀತ್‌ ಆರ್ಯ ಸಾಹಿತ್ಯ ಬರೆದಿ¨ªಾರೆ. ವಿ ಹರಿಕೃಷ ಸಂಗೀತ ಸಂಯೋಜನೆಯಲ್ಲಿ “ಕಾಟೇರ’ ಸಿನಿಮಾದ ಹಾಡುಗಳು ಮೂಡಿಬಂದಿವೆ.

ಇನ್ನು “ಕಾಟೇರ’ ಸಿನಿಮಾದ ಪ್ರೀ-ರಿಲೀಸ್‌ ಇವೆಂಟ್‌ ಮತ್ತು ಹಾಡುಗಳ ಬಿಡುಗಡೆ ಸಮಾರಂಭದಲ್ಲಿ “ಕಾಟೇರ’ ಸಿನಿಮಾದ ನಾಯಕ ನಟ ದರ್ಶನ್‌, ನಾಯಕಿ ಆರಾಧನಾ, ಹಿರಿಯ ನಟಿ ಮಾಲಾಶ್ರೀ, ಶ್ರುತಿ, ಪದ್ಮಾ ವಾಸಂತಿ, ನಟರಾದ ಅವಿನಾಶ್‌, ಅಭಿಷೇಕ್‌ ಅಂಬರೀಶ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಿರ್ದೇಶಕ ತರುಣ್‌ ಸುಧೀರ್‌ ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಹಾಗೂ ಚಿತ್ರರಂಗ, ರಾಜಕೀಯ ರಂಗದ ಅನೇಕ ಗಣ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next